ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸದಿದ್ದರೆ ಆತ್ಮಹತ್ಯೆ
Team Udayavani, Mar 29, 2018, 6:00 AM IST
ಹೊಸದಿಲ್ಲಿ: ಕಾವೇರಿ ಜಲ ನಿರ್ವಹಣ ಮಂಡಳಿಯನ್ನು ಕೂಡಲೇ ರಚಿಸಿ ಎಂದು ಗುಡುಗಿರುವ ಎಐಡಿಎಂಕೆ ಸಂಸದ ನವನೀತ ಕೃಷ್ಣನ್, ಒಂದೊಮ್ಮೆ ಕೇಂದ್ರ ಸರಕಾರ ಗುರುವಾರದೊಳಗೆ ರಚಿಸದೆ ಇದ್ದಲ್ಲಿ ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ಬೆದರಿಕೆ ಹಾಕಿ ದ್ದಾರೆ. ಅಲ್ಲದೆ, ಇದು ನನ್ನ ವೈಯಕ್ತಿಕ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಈ ಸಂಬಂಧ ಅಂತಿಮ ತೀರ್ಪು ನೀಡಿ ಆರು ವಾರಗಳೇ ಕಳೆದಿವೆ. ಆದರೆ ಕೇಂದ್ರ ಸರಕಾರ ರಚನೆಗೆ ಮುಂದಾ ಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತೀರ್ಪು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ ಸರಕಾರ ಕೇಂದ್ರದ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.