Punjab ಹೊಟೇಲ್ ಮಾಲೀಕನಿಂದ ಸೇನಾ ಮೇಜರ್, ಜವಾನರ ಮೇಲೆ ಮಾರಣಾಂತಿಕ ಹಲ್ಲೆ
Team Udayavani, Mar 14, 2024, 3:07 PM IST
ಪಂಜಾಬ್: ಸೋಮವಾರ ಪಂಜಾಬ್ನ ಮನಾಲಿ-ರೋಪರ್ ರಸ್ತೆಯಲ್ಲಿರುವ ಧಾಬಾವೊಂದರ ಮಾಲೀಕರು ಮತ್ತು ಕಾರ್ಮಿಕರಿಂದ ಸೇನಾ ಮೇಜರ್ ಮತ್ತು ಅವರ 16 ಸೈನಿಕರ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ಪಂಜಾಬ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ
ಘಟನೆಗೆ ಸಂಬಂಧಿಸಿ ಹೋಟೆಲ್ ಮಾಲೀಕ ಸೇರಿ ಕೆಲ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ:
ಲಡಾಖ್ ಸ್ಕೌಟ್ಸ್ನ ಮೇಜರ್ ಸಚಿನ್ ಸಿಂಗ್ ಕುಂತಲ್ ಮತ್ತು ಅವರ ತಂಡದ ಸದಸ್ಯರು ಹಿಂದಿನ ದಿನ ಲಾಹೌಲ್ನಲ್ಲಿ ನಡೆದ ಸ್ನೋ ಮ್ಯಾರಥಾನ್ನಲ್ಲಿ ಭಾಗವಹಿಸಿ ಗೆದ್ದು ಹಿಂತಿರುಗುವ ವೇಳೆ ರಾತ್ರಿ 9.15 ರ ಸುಮಾರಿಗೆ ಊಟಕ್ಕೆ ರೋಪರ್ ಜಿಲ್ಲೆಯ ಭಾರತ್ಗಢ್ ಬಳಿಯ ಆಲ್ಪೈನ್ ಧಾಬಾದಲ್ಲಿ ನಿಲ್ಲಿಸಿದ್ದಾರೆ ಈ ವೇಳೆ ಆಹಾರ ಸೇವಿಸಿದ ತಂಡಕ್ಕೆ ಹೋಟೆಲ್ ಸಿಬಂದಿ ಬಿಲ್ ನೀಡಿದ್ದಾನೆ ಇನ್ನೇನು ಬಿಲ್ ಪಾವತಿಸಬೇಕು ಎನ್ನುವ ವೇಳೆ ಹೋಟೆಲ್ ಮಾಲೀಕ ಆನ್ ಲೈನ್ ಪಾವತಿ ಇಲ್ಲ ಬದಲಾಗಿ ನಗದು ನೀಡಬೇಕೆಂದು ಹೇಳಿದ್ದಾರೆ ಆದರೆ ಇವರು ಅದಾಗಲೇ ಆನ್ ಲೈನ್ ಪಾವತಿ ಮಾಡಿಯಾಗಿದೆ ಇದರಿಂದ ಕೋಪಗೊಂಡ ರೆಸ್ಟೋರೆಂಟ್ ಮಾಲೀಕ ಸೇನಾ ಮೇಜರ್ ಅವರಲ್ಲಿ ನಗದು ಪಾವತಿಗೆ ಪಟ್ಟು ಹಿಡಿದಿದ್ದಾನೆ ಈ ವೇಳೆ ಇಬರ ನಡುವೆ ವಾಗ್ವಾದ ನಡೆದಿದೆ ಒಮ್ಮೆ ಪಾವತಿ ಮಾಡಿದ ಬಳಿಕ ಇನ್ನೊಮ್ಮೆ ನಗದು ಪಾವತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ ಇದರಿಂದ ಕೋಪಗೊಂಡ ಮಾಲೀಕ ಕರೆ ಮಾಡಿ ತನ್ನ ಜನರನ್ನು ಬರಹೇಳಿದ್ದಾನೆ ಕೂಡಲೇ ಅಲ್ಲಿಗೆ ಬಂದ ಯುವಕರ ಗುಂಪು ದೊಣ್ಣೆ, ಕಬ್ಬಿಣದ ಸಲಾಕೆ ಮೂಲಕ ತಂಡದ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಮೇಜರ್ ಅವರ ಕೈಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು ಅವರು ಪ್ರಜ್ಞಾಹೀನರಾಗಿದ್ದರು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ರೋಪರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೆಸ್ಟೋರೆಂಟ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ, ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: Bollywood: ಮಗಳ ವಯಸ್ಸಿನ ನಟಿ ಜೊತೆ ರೊಮ್ಯಾನ್ಸ್; ಅಕ್ಷಯ್ ಕುಮಾರ್ ಮೇಲೆ ನೆಟ್ಟಿಗರು ಗರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ