PM Modi ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಿದ್ದಾರೆ?: ಓವೈಸಿ ಪ್ರಶ್ನೆ
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರವಿದ್ದಾಗ ಮಾತ್ರ ದೇಶ ಚೆನ್ನಾಗಿರುತ್ತದೆ
Team Udayavani, Aug 25, 2023, 6:36 PM IST
ಹೊಸದಿಲ್ಲಿ: ಲಡಾಖ್ ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರನ್ನು ಕತ್ತಲಲ್ಲಿಡುತ್ತಿದ್ದಾರೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಮೊದಲು ಚೀನಾ ಮಾತನಾಡಲು ಬಯಸಿದೆ ಎನ್ನಲಾಯಿತು. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಮಾತುಕತೆಯ ನಂತರ ಅಧಿಕೃತವಾಗಿ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿತ್ತು. ಚೀನಾದ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿ ಮಾತನಾಡಲು ಬಯಸಿದೆ ಎಂದು ಹೇಳಿದೆ. ಆದರೆ ನಂತರ ನಮ್ಮ ವಿದೇಶಾಂಗ ಕಾರ್ಯದರ್ಶಿ ಮತ್ತೇನೋ ಹೇಳಿದರು. ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ, ಚೀನಾ ಅಧ್ಯಕ್ಷರ ಹಿಂದೆ ಮಾತನಾಡಲು ಪ್ರಧಾನಿ ಏಕೆ ಓಡುತ್ತಿದ್ದಾರೆ? ಲಡಾಖ್ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಪ್ರಧಾನಿ ರಾಷ್ಟ್ರದ ನಾಗರಿಕರನ್ನು ಏಕೆ ಕತ್ತಲೆಯಲ್ಲಿ ಇಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
‘ತಮ್ಮ ಪರಿಹಾರವನ್ನು ಒಪ್ಪಿಕೊಳ್ಳುವಂತೆ ಪ್ರಧಾನಿ ಮೋದಿ ಸರಕಾರ ಸೇನೆಯ ಮೇಲೆ ಒತ್ತಡ ಹೇರಲು ಕಾರಣವೇನು? ಚೀನಾ ಸೈನಿಕರಿಗೆ ಪುರಸ್ಕಾರ ಕೊಡಲು ಇವರೇಕೆ ಬಯಸುತ್ತಾರೆ?.ಬಿಜೆಪಿ ಸರಕಾರ ಈ ಬಗ್ಗೆ ಮೌನ ವಹಿಸುತ್ತಿರುವುದೇಕೆ? 2000 ಕಿಮೀ ಚದರ ಪ್ರದೇಶದ ನಷ್ಟದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ನಾವು ಒತ್ತಾಯಿಸುತ್ತೇವೆ ಎಂದರು.
ಇಂಡಿಯಾ ಮೈತ್ರಿಕೂಟದ ವಿರುದ್ಧ ಆಕ್ರೋಶ
ವಿರೋಧ ಪಕ್ಷದ ಮೈತ್ರಿ ಇಂಡಿಯಾ ದೊಡ್ಡ ಚೌಧರಿಗಳ ಕ್ಲಬ್ ಎಂದು ಬಣ್ಣಿಸಿ, ಅಲ್ಲಿ ಕುಳಿತವರು ನಮ್ಮನ್ನು ನಿಂದಿಸುತ್ತಾರೆ ವಿರೋಧ ಪಕ್ಷಗಳಿಗೆ ಇಂಡಿಯಾ ಮೈತ್ರಿಕೂಟ ಪರ್ಯಾಯವಲ್ಲ ಎಂದು ಹೇಳಿದರು.
ಕಾಂಗ್ರೆಸ್ 50 ವರ್ಷ ಮತ್ತು ಬಿಜೆಪಿ 18 ವರ್ಷ ಈ ದೇಶವನ್ನು ಆಳಿದೆ. ಈ ದೇಶಕ್ಕೆ ತೃತೀಯ ರಂಗದ ಸರಕಾರ ಬೇಕು, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರವಿರಬೇಕು, ಆಗ ಮಾತ್ರ ಈ ದೇಶ ಚೆನ್ನಾಗಿರುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?