ಅಸಾರಾಮ್ ಬಾಪು ಪ್ರಕರಣ : ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ, ಪೊಲೀಸರಿಂದ ಭದ್ರತೆ
Team Udayavani, Apr 9, 2022, 8:41 PM IST
ಲಕ್ನೋ: 2013ರಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನುವ ಆರೋಪ ಎದುರಿಸಿದ್ದ ಅಸಾರಾಮ್ ಬಾಪು ಸ್ವಾಮಿ ಮೇಲೆ ಇದೀಗ ಅದೇ ಕುಟುಂಬದಿಂದ ಮತ್ತೂಂದು ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ಗೊಂಡಾದಲ್ಲಿರುವ ಅಸಾರಾಮ್ ಅವರ ಆಶ್ರಮದ ಸಿಬ್ಬಂದಿ, ಯುವತಿಯ ಕುಟುಂಬಕ್ಕೆ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಮನೆಯ ಬಾಗಿಲ ಬಳಿ ಬೆದರಿಕ ಪತ್ರ ಇಟ್ಟು ಹೋಗಿದ್ದಾಗಿ ಹೇಳಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯ ಮನೆಗೆ ಭದ್ರತೆ ಕೊಟ್ಟಿದ್ದಾರೆ.
ಅಸಾರಾಮ್ ಅವರ ಆಶ್ರಮದ ಒಳಗಿದ್ದ ಕಾರೊಂದರಲ್ಲಿ ಬಾಲಕಿಯೊಬ್ಬಳ ಮೃತ ದೇಹ ಪತ್ತೆಯಾದ ಬೆನ್ನಲ್ಲೇ ಈ ಬೆದರಿಕೆ ವಿಚಾರ ಹೊರಬಿದ್ದಿದೆ.
ಇದನ್ನೂ ಓದಿ : ವಿಜಯಪುರ : ಸಿಡಿಲು ಬಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸ್ಥಳದಲ್ಲೇ ಸಾವು