ಸುಪ್ರೀಂ ‘ಸಂಧಾನ’ ಸಲಹೆಗೆ ಸಂಘಟನೆಗಳ ಮಿಶ್ರ ಪ್ರತಿಕ್ರಿಯೆ
Team Udayavani, Mar 8, 2019, 6:53 AM IST
ನವದೆಹಲಿ: ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಜಮೀನು ವಿವಾದವನ್ನು ನ್ಯಾಯಲಯದಿಂದ ಹೊರಗೆ ಸಂಧಾನ ಪ್ರಕ್ರಿಯೆಯ ಮೂಲಕ ಎಂಟು ವಾರಗಳೊಳಗಾಗಿ ಪರಿಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವು ಇಂದು ನೀಡಿರುವ ಆದೇಶಕ್ಕೆ ಹಿಂದೂ ಮತ್ತು ಮುಸ್ಲಿಂ ಸಮುದಾಯ ಹಾಗೂ ವಿವಿಧ ಸಂಘಟನೆಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೂ ಮಹಾಸಭಾ, ಅಖಿಲ ಭಾರತ ಹಿಂದೂ ಮಹಾಸಭಾದಂತಹ ಸಂಘಟನೆಗಳು ಈ ಆದೇಶವನ್ನು ಸ್ವಾಗತಿಸಿದ್ದರೆ ನಿರ್ಮೋಹಿ ಅಖಾಡವು ಸಂಧಾನಕಾರರ ಕುರಿತಾಗಿ ಅಪಸ್ವರವೆತ್ತಿದೆ.
ಶ್ರೀ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ‘ಈ ಹಿಂದೆ ಮಾತುಕತೆ ವಿಫಲಗೊಂಡ ಕಾರಣದಿಂದಲೇ ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಅಯೋಧ್ಯೆಯಲ್ಲಿರುವ ಭೂಮಿ ಶ್ರೀ ರಾಮನಿಗೆ ಸೇರಿದ್ದೆಂಬುದಕ್ಕೆ ಪ್ರಬಲವಾದ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೂ ಸಹ ಈಗ ನ್ಯಾಯಾಲಯವು ಮತ್ತೆ ಮಾತುಕಥೆಗೆ ಸಂಧಾನಕಾರರನ್ನು ನೇಮಿಸಿರುವ ಕ್ರಮ ಸರಿಯಾದುದಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷರಾಗಿರುವ ಸ್ವಾಮಿ ಚಕ್ರಪಾಣಿ ಅವರು ಸುಪ್ರೀಂ ಕೋರ್ಟ್ ನ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ‘ನಾವು ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ, ನಮಗೆ ಇದರಿಂದ ಸಂತೋಷವಾಗಿದೆ, ಮತ್ತು ಶ್ರೀ ಶ್ರೀ ರವಿಶಂಕರ್ ಗರೂಜಿಯವರು ಸಂಧಾನ ಸಮಿತಿಯ ಸದಸ್ಯರಾಗಿರುವುದಕ್ಕೆ ನಮಗೆ ಸಂತೋಷವಿದೆ ಎಂದು ಸ್ವಾಮಿ ಚಕ್ರಪಾಣಿ ಅವರು ತಿಳಿಸಿದ್ದಾರೆ.
‘ಈ ಹಿಂದಿನ ನಮ್ಮ ಸಂಧಾನ ಪ್ರಕ್ರಿಯೆ ನಿರಾಶದಾಯಕವಾಗಿತ್ತು, ಉಚ್ಛನ್ಯಾಯಾಲಯವು ಈ ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ನಾನು ಭಾವಿಸಿದ್ದೇನೆ’ ಎಂದು ಹಿಂದೂ ಮಹಾಸಭಾದ ನ್ಯಾಯವಾದಿ ವರುಣ್ ಕುಮಾರ್ ಸಿನ್ಹಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಸ್ಲಿಂ ಸಂಘಟನೆಗಳು ನ್ಯಾಯಾಲಯದ ಈ ತೀರ್ಪಿಗೆ ತಮ್ಮ ಸ್ವಾಗತವನ್ನು ವ್ಯಕ್ತಪಡಿಸಿವೆ. ಆದರೆ ಶ್ರೀ ಶ್ರೀ ರವಿಶಂಕರ್ ಗುರೂಜಿಯವರನ್ನು ಸಂಧಾನಕಾರರಲ್ಲಿ ಒಬ್ಬರನ್ನಾಗಿ ನೇಮಕ ಮಾಡಿರುವುದಕ್ಕೆ ಪ್ರಮುಖ ಅರ್ಜಿದಾರರಲ್ಲೊಬ್ಬರಾಗಿರುವ ನಿರ್ಮೋಹಿ ಅಖಾಡ ವಿರೋಧವನ್ನು ವ್ಯಕ್ತಪಡಿಸಿದೆ.
ನಿರ್ಮೋಹಿ ಅಖಾಡವು ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್, ಎ.ಕೆ. ಪಟ್ನಾಯಕ್ ಮತ್ತು ಜಿ.ಎಸ್. ಸಿಂಘ್ವಿ ಅವರ ಹೆಸರುಗಳನ್ನು ಸಂಧಾನಕಾರರನ್ನಾಗಿ ಹೆಸರಿಸಿತ್ತು. ಹಿಂದೂ ಮಹಾಸಭಾವು ನಿವೃತ್ತ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ದೀಪಕ್ ಮಿಶ್ರಾ ಮತ್ತು ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರ ಹೆಸರನ್ನು ನಮೂದಿಸಿತ್ತು.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ರಾಮಮಂದಿರ ತೀರ್ಪಿನ ವಿರುದ್ಧ ಹದಿನಾಲ್ಕು ಮೇಲ್ಮನವಿಗಳು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು. ಅಲಹಾಬಾದ್ ಹೈಕೋರ್ಟ್ ಅಂದಿನ ತನ್ನ ತೀರ್ಪಿನಲ್ಲಿ ವಿವಾದಿತ 2.77 ಎಕರೆ ಭೂಮಿಯನ್ನು ಸುನ್ನೀ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ಪರವಾಗಿ ಸಮನಾಗಿ ಹಂಚಿಕೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶ ಪ್ರವಾಸೋದ್ಯಮ ಕೈಗೆತ್ತಿಕೊಳ್ಳಲು ಇಸ್ರೋ ಅಧ್ಯಯನ: ಕೇಂದ್ರ ಸರ್ಕಾರ
ವಂದನಾ ನಿರ್ಣಯ; ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ ಪ್ರಧಾನಿ ಮೋದಿ
ಭಾರತದ ಪ್ರದೇಶದೊಳಗೆ ನುಸುಳಿಬಂದ ಪಾಕ್ ಡ್ರೋನನ್ನು ಹೊಡೆದುರುಳಿಸಿದ ಬಿಎಸ್ಎಫ್
ಸ್ಮೃತಿ ಇರಾನಿ ಮಗಳು ಶಾನೆಲ್ಲೆ ಇರಾನಿಯ ವಿವಾಹ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಭಾರತ,ಜಪಾನ್ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್ ಪೋಸ್ಟ್ನಿಂದ ಆತಂಕಕಾರಿ ವರದಿ
MUST WATCH
ಹೊಸ ಸೇರ್ಪಡೆ
ಬಾಹ್ಯಾಕಾಶ ಪ್ರವಾಸೋದ್ಯಮ ಕೈಗೆತ್ತಿಕೊಳ್ಳಲು ಇಸ್ರೋ ಅಧ್ಯಯನ: ಕೇಂದ್ರ ಸರ್ಕಾರ
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ: ಗೋವಾ ಸಿಎಂ
ಭಾರತೀಯ ಸೇನೆಯ ʻಆಪರೇಷನ್ ಮೋತಿʼಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ
ಜನರೊಂದಿಗೆ ದರ್ಪದ ವರ್ತನೆ ತೋರುತ್ತಿರುವ ಮೇಲಿನ ಕುರುವಳ್ಳಿ ಪಿಡಿಒ ವರ್ಗಾವಣೆಗೆ ಆಗ್ರಹ
ಸ್ವಾವಲಂಬನೆ ಬದುಕಿಗೆ ಶ್ರೀಕಾರ ಹಾಕಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ