ರೈತರಿಂದ ಬಲವಂತದ ಸಾಲ ವಸೂಲಿ ಸಲ್ಲದು: ಸುಪ್ರೀಂ ಕೋರ್ಟ್
Team Udayavani, Jul 8, 2017, 11:40 AM IST
ಹೊಸದಿಲ್ಲಿ : ಬೆಳೆ ವೈಫಲ್ಯ ಉಂಟಾದ ಸಂದರ್ಭಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ರೈತರ ಸಾಲಗಳನ್ನು ಬಲವಂತದಿಂದ ವಸೂಲಿ ಮಾಡಬಾರದು; ಅಂತಹ ಸನ್ನಿವೇಶಗಳಲ್ಲಿ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರಕಾರ ರೈತರಿಗೆ ಪರಿಹಾರ ಕೊಡುವುದಕ್ಕಿಂತಲೂ ಮಿಗಿಲಾಗಿ ಅವರ ಕೃಷಿ ಸಂಕಷ್ಟಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯವೆಸಗಬೇಕು. ಈ ದಿಶೆಯಲ್ಲಿ ಸರಕಾರ ರೈತರಿಗೆ ನೆರವಾಗಲು ಕೊನೇ ಹಂತದ ವರೆಗೂ ಸಾಗಬೇಕು ಎಂದು ಜಸ್ಟಿಸ್ ದೀಪಕ್ ಮಿಶ್ರಾ ಮತ್ತು ಜಸ್ಟಿಸ್ ಎ ಎಂ ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠವು ಹೇಳಿದೆ.
ತಮಿಳು ನಾಡಿನ ರೈತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯ ವಿಚರಾಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿಯಾಗಿ ಹೇಳಿದೆ.