ಬಿಜೆಪಿಯ ಅಂತ್ಯದ ಆರಂಭವಾಗಿದೆ :ಶಿವ ಸೇನೆ


Team Udayavani, Mar 17, 2018, 2:38 PM IST

uddhav-thackeray.jpg

ಮುಂಬಯಿ: ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭೆ ಸ್ಥಾನಗಳಿಗೆ ಇತ್ತೀಚೆಗೆ  ನಡೆದ  ಉಪಚುನಾವಣೆಗಳಲ್ಲಿ  ಸೋಲು ಅನುಭವಿಸಿರುವುದು ಬಿಜೆಪಿಯ ಅಂತ್ಯದ  ಆರಂಭ ಎಂದು ಮಿತ್ರಪಕ್ಷ ಶಿವಸೇನೆ ಅಣಕವಾಡಿದೆ. 

ಇತ್ತೀಚಿನ ಉಪಚುನಾವಣಾ ಫ‌ಲಿತಾಂಶಗಳು  ಮತ್ತು  ಒಟ್ಟಾರೆಯಾಗಿ  ಸದ್ಯ ದೇಶದಲ್ಲಿ  ಕಂಡುಬರುತ್ತಿರುವ  ರಾಜಕೀಯ ಪರಿಸ್ಥಿತಿಯನ್ನು  ಸೂಕ್ಷ್ಮವಾಗಿ  ಅವಲೋಕಿಸಿದ್ದೇ ಆದಲ್ಲಿ  2019ರಲ್ಲಿ  ನಡೆಯಲಿರುವ  ಲೋಕಸಭೆ  ಚುನಾವಣೆಯಲ್ಲಿ  ಬಿಜೆಪಿ 100-110 ಸ್ಥಾನಗಳಲ್ಲಿ  ಜಯ ಗಳಿಸಲಷ್ಟೇ  ಶಕ್ತವಾಗಲಿದೆ. ಈ  ಎಲ್ಲಾ ಬೆಳವಣಿಗೆಗಳು  ಬಿಜೆಪಿಯ  ಅಂತ್ಯಕ್ಕೆ  ನಾಂದಿ  ಹಾಡಿದಂತಾಗಿದೆ ಎಂದು  ಶಿವಸೇನೆಯ ಮುಖವಾಣಿಯಾಗಿರುವ  “ಸಾಮ್ನಾ’ದ  ಸಂಪಾದಕೀಯದಲ್ಲಿ  ಬಿಜೆಪಿ  ವಿರುದ್ಧ  ಟೀಕಾಪ್ರಹಾರ  ನಡೆಸಲಾಗಿದೆ. 

ಬಿಜೆಪಿ  ಪ್ರಾಬಲ್ಯದ  ಕ್ಷೇತ್ರಗಳಾದ  ಉತ್ತರಪ್ರದೇಶದ  ಗೋರಕ್‌ಪುರ ಮತ್ತು  ಫ‌ೂಲ್ಪುರಗಳಲ್ಲಿ  ಸಮಾಜವಾದಿ ಪಾರ್ಟಿಯ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವುದು  ಬಿಜೆಪಿ  ಪಾಳಯದಲ್ಲಿ  ಆತಂಕವನ್ನು  ಸೃಷ್ಟಿಸಿದೆ.  ವಾರದ  ಹಿಂದೆಯಷ್ಟೇ  ತ್ರಿಪುರದಲ್ಲಿ  ಸಾಧಿಸಿದ  ಭರ್ಜರಿ ಗೆಲುವಿನ  ಸಂಭ್ರಮಾಚರಣೆಯಲ್ಲಿದ್ದ  ಬಿಜೆಪಿಗೆ  ಉಪಚುನಾವಣೆಯಲ್ಲಾದ ಸೋಲು  ಒಂದಿಷ್ಟು  ನಡುಕವನ್ನು  ಉಂಟುಮಾಡಿರುವುದಂತೂ  ಸುಳ್ಳಲ್ಲ  ಎಂದು  ಸಂಪಾದಕೀಯದಲ್ಲಿ  ಹೇಳಲಾಗಿದೆ. 

ಉತ್ತರಪ್ರದೇಶದ  ಎರಡೂ  ಲೋಕಸಭೆ  ಸ್ಥಾನಗಳಲ್ಲಿ  ಸಮಾಜವಾದಿ ಪಾರ್ಟಿಯ ಅಭ್ಯರ್ಥಿಗಳು ಭಾರಿ  ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು  ಜನರು  ಬಿಜೆಪಿಯನ್ನು ಸೋಲಿಸಲು  ಪಣತೊಟ್ಟಿದ್ದನ್ನು  ಸಾಬೀತುಪಡಿಸಿದೆ. ಮೋದಿ ಅಲೆಯಿಂದಾಗಿ  2014ರ  ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿ  ಅಧಿಕಾರಕ್ಕೆ  ಬಂದಿತ್ತು.  ಆದರೆ ಇದೀಗ ಕ್ರಮೇಣ  ಮೋದಿ  ಅಲೆ ಕಡಿಮೆಯಾಗತೊಡಗಿದೆ. ಇದೀಗ  ದೇಶದ  ಜನರಿಗೆ  ಎಲ್ಲವೂ  ಸ್ಪಷ್ಟವಾಗಿ  ಅರಿವಾಗತೊಡಗಿದೆ. ವರ್ಷದ  ಹಿಂದೆಯಷ್ಟೇ ಬಿಜೆಪಿ  ಉತ್ತರಪ್ರದೇಶ  ವಿಧಾನಸಭೆಗೆ  ನಡೆದ ಚುನಾವಣೆಯಲ್ಲಿ  ದಾಖಲೆಯ 325 ಸ್ಥಾನಗಳಲ್ಲಿ  ಗೆಲುವು ಸಾಧಿಸುವ  ಮೂಲಕ ಅಧಿಕಾರಕ್ಕೆ  ಬಂದಿತ್ತು.  ಹಾಲಿ ಮುಖ್ಯಮಂತ್ರಿಯಾಗಿರುವ  ಯೋಗಿ ಆದಿತ್ಯನಾಥ್‌ ಅವರು 1991ರಿಂದೀಚೆಗೆ  ಗೋರಕ್‌ಪುರ ಕ್ಷೇತ್ರದಲ್ಲಿ  ಸೋಲು ಕಂಡಿರಲಿಲ್ಲ. ಈ ಕಾರಣದಿಂದಾಗಿಯೇ  ಅವರು ಮುಖ್ಯಮಂತ್ರಿ ಗಾದಿಗೇರಿದ್ದರು. ಇಷ್ಟೊಂದು  ಭಾರೀ  ಜನಪ್ರಿಯತೆಯ  ಹೊರತಾಗಿಯೂ  ಬಿಜೆಪಿಗೆ  ತನ್ನ  ತವರು  ಕ್ಷೇತ್ರವನ್ನು  ಉಳಿಸಿಕೊಳ್ಳಲಾಗದಿರಲು  ಕಾರಣವೇನು? ಎಂದು ಸಂಪಾದಕೀಯದಲ್ಲಿ  ಪ್ರಶ್ನಿಸಲಾಗಿದೆ. 

ತೀವ್ರತೆ ಕಳೆದುಕೊಳ್ಳುತ್ತಿರುವ ಮೋದಿ ಅಲೆ
ಪ್ರಧಾನಿ ನರೇಂದ್ರ ಮೋದಿ ಅವರು  ಪ್ರಧಾನಿಯಾಗಿ  ಅಧಿಕಾರ ವಹಿಸಿಕೊಂಡ  ಬಳಿಕ ದೇಶದಲ್ಲಿ  10 ಉಪಚುನಾವಣೆಗಳು  ನಡೆಸಿದ್ದು  ಈ ಪೈಕಿ  9ರಲ್ಲಿ  ಬಿಜೆಪಿ ಸೋಲು ಕಂಡಿದೆ. ಇದರಿಂದಾಗಿ  ಲೋಕಸಭೆಯಲ್ಲಿ  282 ಸ್ಥಾನಗಳನ್ನು ಹೊಂದಿದ್ದ  ಬಿಜೆಪಿಯ ಸಂಖ್ಯಾಬಲ ಇದೀಗ 272ಕ್ಕೆ  ಕುಸಿದಿದೆ ಎಂದು  ಶಿವಸೇನೆ ಬೆಟ್ಟು ಮಾಡಿದೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.