4 ಲಕ್ಷ ರೂ. ನಗದು ಹೊಂದಿದ್ದ ಬ್ಯಾಗ್ ಎತ್ತಿಕೊಂಡು ಮರವೇರಿದ ಕಪಿ…ಮುಂದೇನಾಯ್ತು?
ರಿಜಿಸ್ಟ್ರಾರ್(ನೋಂದಣಿ ಕಚೇರಿ) ಕಚೇರಿ ಹೊರಗಿನ ಮರವೇರಿ ನೋಟುಗಳನ್ನು ಎಸೆದಿತ್ತು
Team Udayavani, Dec 23, 2020, 2:34 PM IST
ಸೀತಾಪುರ್(ಉತ್ತರಪ್ರದೇಶ): ಕಪಿ ಚೇಷ್ಟೆ ಒಂದೆರಡಲ್ಲ ಎಂಬುದಕ್ಕೆ ಉತ್ತರಪ್ರದೇಶದ ಸೀತಾಪುರ್ ಎಂಬಲ್ಲಿ ನಡೆದ ಈ ಘಟನೆಯೂ ಸಾಕ್ಷಿಯಾಗಿದೆ. ದಿಢೀರನೆ ಬಂದು ಹಣ ತುಂಬಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಹೋದ ಕಪಿ ರಿಜಿಸ್ಟ್ರಾರ್(ನೋಂದಣಿ ಕಚೇರಿ) ಕಚೇರಿ ಹೊರಗಿನ ಮರವೇರಿ ನೋಟುಗಳನ್ನು ಎಸೆದಿತ್ತು.!
ನೋಡ, ನೋಡುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿ ನೋಟು ಗಾಳಿಯಲ್ಲಿ ಹಾರಾಡುತ್ತ ನೋಂದಣಿ ಕಚೇರಿ ಸುತ್ತಮುತ್ತ ಬೀಳುತ್ತಿರುವುದನ್ನು ಕಂಡು ಏನಿದು ಎಂದು ಕುತೂಹಲ, ಅಚ್ಚರಿಯಿಂದ ಕಂಡವರಿಗೆ ಕಪಿ ಚೇಷ್ಟೆ ಬೆಳಕಿಗೆ ಬಂದಿತ್ತು.
ಸೀತಾಪುರ್ ನ ವಿಕಾಸ್ ಭವನದ ರಿಜಿಸ್ಟ್ರಿ ಕಚೇರಿ ಹೊರಭಾಗದಲ್ಲಿ ಹಿರಿಯ ವ್ಯಕ್ತಿಯೊಬ್ಬರು 4 ಲಕ್ಷ ರೂಪಾಯಿ ಹೊಂದಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದರು. ಆಗ ದಿಢೀರ್ ಆಗಿ ಬಂದ ಮಂಗ ಬ್ಯಾಗ್ ಎತ್ತಿಕೊಂಡು ಮರ ಏರಿ ಕುಳಿತುಕೊಂಡು ಬಿಟ್ಟಿತ್ತು. ನಂತರ ಸುಮಾರು 10, 12 ಸಾವಿರ ರೂಪಾಯಿಗಳಷ್ಟು ನೋಟುಗಳನ್ನು ಕೆಳಗೆ ಎಸೆದಿತ್ತು ಎಂದು ವರದಿ ವಿವರಿಸಿದೆ.
ಪುಕ್ಕಟ್ಟೆ ಸಿಕ್ಕ ಹಣ ಎಂದು ಗುಂಪುಗೂಡಿದ ಜನ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದು, ಕೊನೆಗೂ ಏನೆಲ್ಲಾ ಪ್ರಯತ್ನ ಮಾಡಿದ ನಂತರ ಮಂಗ ಬ್ಯಾಗ್ ಅನ್ನು ಕೆಳಕ್ಕೆ ಎಸೆದಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ