ಬಿಜೆಪಿ 10ನೇ ಪಟ್ಟಿ ಬಿಡುಗಡೆ: ನಾಲ್ವರು ಹಾಲಿ ಸಂಸದರಿಗೆ ತಪ್ಪಿದ ಟಿಕೆಟ್
Team Udayavani, Apr 10, 2024, 11:44 PM IST
ಹೊಸದಿಲ್ಲಿ: ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ 10ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ 7 ಲೋಕಸಭೆ ಕ್ಷೇತ್ರ , ಚಂಡೀಗಢದ 1 ಹಾಗೂ ಪಶ್ಚಿಮ ಬಂಗಾಲದ 1 ಕ್ಷೇತ್ರಕ್ಕೆ (ಮರು ಘೋಷಣೆ) ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ನಾಲ್ವರು ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ.
ಉತ್ತರ ಪ್ರದೇಶದ ಮೈನ್ಪುರಿ, ಕೌಶಂಬಿ, ಫುಲ್ಪರ್, ಅಲಹಾಬಾದ್, ಬಲಿಯಾ, ಮಚಿಲ್ ಶಹರ್, ಘಾಜಿಪುರ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ.
ಬಲಿಯಾದಲ್ಲಿ ಹಾಲಿ ಸಂಸದ ವೀರೇಂದ್ರ ಸಿಂಗ್ ಬದಲಿಗೆ ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಶೇಖರ್ ಕಣಕ್ಕಿಳಿಸಲಾಗಿದೆ. ಅಲಹಾಬಾದ್ನಲ್ಲಿ ಸಂಸದೆ ರಿತಾ ಬಹುಗುಣ ಬದಲಿಗೆ ನೀರಜ್ ತ್ರಿಪಾಠಿಗೆ ಟಿಕೆಟ್ ನೀಡಲಾಗಿದ್ದು, ಫುಲ್ಪರ್ನಲ್ಲಿ ಕೇಶರಿ ದೇವಿಗೆ ಟಿಕೆಟ್ ಕೈ ತಪ್ಪಿದೆ.
ಚಂಡೀಗಢದ ಸಂಸದರಾದ ಕಿರಣ್ ಖೇರ್ಗೆ ಟಿಕೆಟ್ ಕೈ ತಪ್ಪಿದ್ದು, ಆ ಕ್ಷೇತ್ರದಿಂದ ಸಂಜಯ್ ಟಂಡನ್ ಸ್ಪರ್ಧಿ ಸುತ್ತಿದ್ದಾರೆ. ಪ.ಬಂಗಾಲದ ಅಸಾನ್ಸೋಲ್ ಕ್ಷೇತ್ರಕ್ಕೆ ಈ ಹಿಂದೆ ಘೋಷಿಸಿದ್ದ ಅಭ್ಯರ್ಥಿ ಪವನ್ ಸಿಂಗ್ ಬದಲಿಗೆ ಎಸ್.ಎಸ್. ಅಹುವಾಲಿಯಾ ಹೆಸರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ