ಮಮತಾ ಭದ್ರಕೋಟೆ ಕೋಲ್ಕತದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ, ಜನಸಾಗರ
Team Udayavani, May 14, 2019, 7:28 PM IST
ಕೋಲ್ಕತ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಂದು ಟಿಎಂಸಿ ವಿರುದ್ಧದ ಚುನಾವಣಾ ಕದನವನ್ನು ನೇರವಾಗಿ ಮಮತಾ ಬ್ಯಾನರ್ಜಿ ಅವರ ಭದ್ರ ಕೋಟೆಗೆ ಒಯ್ದು 2019ರ ಅಂತಿಮ ಹಂತದ ಚುನಾವಣೆಗೆ ಮುನ್ನ ಕೋಲ್ಕತದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಇಡಿಯ ಮಹಾನಗರಿಯನ್ನು ಕೇಸರಿಮಯ ಗೊಳಿಸಿದರು.
ಬಿಜೆಪಿಯ ಸಾವಿರಾರು ಮಂದಿ ಬೆಂಬಲಿಗರು ಕೋಲ್ಕತ ಬೀದಿಗೆ ಇಳಿದು ಅಮಿತ್ ಶಾ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು. ಭಾರೀ ಜೋಶ್ ನಲ್ಲಿದ್ದಂತೆ ಕಂಡು ಬಂದ ಅಮಿತ್ ಶಾ ಪದೇ ಪದೇ ಗಾಳಿಗೆ ಗುದ್ದು ಹೊಡೆದು ವಿಜಯದ ಸೂಚನೆಯಾಗಿ ಎರಡು ಬೆರಳುಗಳನ್ನು ಎತ್ತಿ ತೋರಿಸಿದರು.
‘ಪಶ್ಚಿಮ ಬಂಗಾಲದಲ್ಲಿ ನಾವು ಪ್ರಜಾಸತ್ತೆಯನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇಡಿಯ ದೇಶದಲ್ಲಿ ಈ ರಾಜ್ಯ ಮಾತ್ರವೇ ಚುನಾವಣಾ ಸಂಬಂಧಿ ಹಿಂಸೆಯನ್ನು ಕಂಡಿದೆ. ಇಲ್ಲಿನ ಜನರು ಮಮತಾ ಬ್ಯಾನರ್ಜಿ ವಿರುದ್ದ ತೀವ್ರವಾಗಿ ಕ್ರುದ್ಧರಾಗಿದ್ದಾರೆ ಮತ್ತು ನಮಗೆ ಇಲ್ಲಿ ಪೂರ್ಣ ಬೆಂಬಲ ಇರುವುದು ಎಲ್ಲೆಡೆ ಕಂಡು ಬರುತ್ತಿದೆ’ ಎಂದು ಅಮಿತ್ ಶಾ ಹೇಳಿದರು.
ಅಮಿತ್ ಶಾ ರೋಡ್ ಶೋ ಮೂಲತಃ ಸಾಹಿದ್ ಮಿನಾರ್ ಮೈದಾನದಿಂದ ಆರಂಭಗೊಳ್ಳುವುದಿತ್ತು; ಆದರೆ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ರೋಡ್ ಶೋವನ್ನು ಧರ್ಮತಾಲಾ ದಿಂದ ಆರಂಭಿಸಲಾಯಿತು. ಬಿಜೆಪಿ ಸಾಹಿದ್ ಮಿನಾರ್ ಮೈದಾನದಲ್ಲಿ ವೇದಿಕೆಯೊಂದನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಅನುಮತಿ ನಿರಾಕರಿಸಲಾಗಿತ್ತು.
ಹಾಗಿದ್ದರೂ ರೋಡ್ ಶೋ ಆರಂಭಗೊಳ್ಳುವ ತಾಣವನ್ನು ಬದಲಾಯಿಸಲಾದ ಕಾರಣ ಬಿಜೆಪಿ ಕಾರ್ಯಕರ್ತರ ಹುರುಪು ಎಳ್ಳಷ್ಟೂ ಕಡಿಮೆಯಾಗಲಿಲ್ಲ.
ಸಹಸ್ರಾರು ಸಂಖ್ಯೆಯ ಜನರು ಬಿಜೆಪಿ ಬೆಂಬಲಿಸಿ ರೋಡ್ ಶೋ ನಲ್ಲಿ ಪಾಲ್ಗೊಂಡರು. ಆ ಮೂಲಕ ಬಿಜೆಪಿಗೆ ಕೋಲ್ಕತದಲ್ಲೂ ಇಡಿಯ ಪಶ್ಚಿಮ ಬಂಗಾಲದಲ್ಲೂ ಜನ ಬೆಂಬಲ ಇರುವುದು ಖಚಿತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ