ತಿಂಗಳ ಬಳಿಕ ಅಸ್ಥಿ ದರ್ಶನ
Team Udayavani, Jan 18, 2019, 12:30 AM IST
ಶಿಲ್ಲಾಂಗ್: ತಿಂಗಳ ಹಿಂದೆ ನಡೆದಿದ್ದ ಇಲ್ಲಿನ ರ್ಯಾಟ್ ಹೋಲ್ ಗಣಿ ದುರಂತದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿರುವ ನೌಕಾ ಪಡೆಯ ಸಿಬಂದಿ, ಗುರುವಾರ ಗಣಿಯೊಳಗಿನ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬನ ಅಸ್ಥಿಪಂಜರವೊಂದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಡಿ. 13ರಂದು ನಡೆದಿದ್ದ ಈ ಗಣಿ ದುರಂತದಲ್ಲಿ ಸುಮಾರು 20 ಕಾರ್ಮಿಕರು 370 ಅಡಿ ಆಳದಲ್ಲಿ ಸಿಲುಕಿದ್ದರು. ಲಿಟೇನ್ ನದಿ ಹಾದು ಹೋಗುವ ಬೆಟ್ಟ ಗುಡ್ಡಗಳಲ್ಲಿ ಈ ಗಣಿಗಾರಿಕೆ ನಡೆಸುತ್ತಿದ್ದರಿಂದ ಡಿ. 13ರ ಮುಂಜಾನೆ, ಗಣಿಯೊಳಗೆ ನದಿ ನೀರು ನುಗ್ಗಿತ್ತು. ಈ ದುರ್ಘಟನೆಯಲ್ಲಿ ಐವರು ಈಜಿ ಮೇಲೆ ಬಂದಿದ್ದರೂ, ಉಳಿದವರು ಒಳಗಡೆಯೇ ಸಿಲುಕಿದ್ದರು.
ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ವಾಯು ಪಡೆಯ ತಜ್ಞರು ಈ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆರ್ಒವಿ (ರಿಮೋಟ್ಲೀ ಆಪರೇಟೆಡ್ ವೆಹಿಕಲ್ಸ್) ಮೂಲಕ ನೀರು ತುಂಬಿರುವ ಗಣಿಯೊಳಗೆ ಸರ್ವೇಕ್ಷಣೆ ನಡೆಸುತ್ತಿರುವ ನೌಕಾಪಡೆಯ ತಂಡಕ್ಕೆ 160ರಿಂದ 210 ಅಡಿ ಆಳದ ಅಂತರದಲ್ಲಿ ಭಾಗಶಃ ಅಸ್ಥಿಪಂಜರವಾಗಿರುವ ಕಳೇಬರವೊಂದು ಪತ್ತೆಯಾಗಿದೆ. ಇದರ ಜತೆಗೆ ಇನ್ನೂ ಕೆಲವು ಅಸ್ಥಿಪಂಜರಗಳು ಕಾಣಿಸಿವೆ ಎಂದು ಹೇಳಲಾಗಿದೆ. ಕಾರ್ಯಾಚರಣೆ ತಿಂಗಳು ದಾಟಿದ್ದರಿಂದ ಕಾರ್ಮಿಕರು ಬದುಕಿರಲಾರರು ಎಂಬ ಅನುಮಾನಗಳಿಗೆ ಇದು ಪುಷ್ಟಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…