Cancer ಗುಣವಾಗುತ್ತೆ ಎಂದು ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ಮಹಿಳೆ… ಆಗಿದ್ದೇ ಬೇರೆ
Team Udayavani, Jan 25, 2024, 12:52 PM IST
ಹೊಸದಿಲ್ಲಿ: ಗಂಗಾಸ್ನಾನ ಮಾಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ಐದು ವರ್ಷದ ಬಾಲಕನೊಬ್ಬನನ್ನು ಪೋಷಕರು ಗಂಗಾ ಸ್ನಾನ ಮಾಡಿಸುವ ವೇಳೆ ಬಾಲಕನ ಪ್ರಾಣಪಕ್ಷಿ ಹಾರಿ ಹೋದ ಘಟನೆ ನಡೆದಿದೆ.
ಪೋಷಕರು ನೋಡುತ್ತಿರುವಾಗಲೇ ಮಗುವಿನ ಚಿಕ್ಕಮ್ಮ ತಣ್ಣನೆಯ ಗಂಗೆಯಲ್ಲಿ ಬಾಲಕನನ್ನು ಮುಳುಗಿಸಿದ್ದಾಳೆ. ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ವಿಚಾರ ಬೆಳಕಿಗೆ ಬಂದಿದೆ.
ಹರಿದ್ವಾರದಲ್ಲಿ ಈ ಘಟನೆ ನಡೆದಿದ್ದು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕನನ್ನು ಆತನ ಪೋಷಕರು ಹಾಗೂ ಚಿಕ್ಕಮ್ಮ ಹರಿದ್ವಾರದ ಗಂಗಾ ನದಿ ಬಳಿಗೆ ಕರೆತಂದಿದ್ದಾರೆ. ಈ ವೇಳೆ ಪೋಷಕರು ನದಿಯ ತಟದಲ್ಲಿ ದೇವರ ಧ್ಯಾನ ಮಾಡುತ್ತಿದ್ದರೆ ಬಾಲಕನ ಚಿಕ್ಕಮ್ಮ ಬಾಲಕನನ್ನು ಗಂಗಾ ನದಿಯಲ್ಲಿ ಕೆಲ ಹೂತ್ತು ಮುಳುಗಿಸಿ ಹಿಡಿದಿದ್ದಾರೆ ಇದನ್ನು ಕಂಡ ಅಲ್ಲಿದ್ದ ಇತರ ಮಂದಿ ಬಾಲಕನನ್ನು ನೀರಿನಿಂದ ಮೇಲೆತ್ತಲು ಹೇಳಿದ್ದಾರೆ ಆದರೆ ಇದಕ್ಕೆ ಒಪ್ಪದ ಚಿಕ್ಕಮ್ಮ ಮತ್ತೆ ನೀರಿನಲ್ಲಿ ಮುಳುಗಿಸಿ ಹಿಡಿದಿದ್ದಾರೆ ಇದರಿಂದ ಸಿಟ್ಟಿಗೆದ್ದ ಅಲ್ಲಿದ್ದ ಮಂದಿ ಬಾಲಕನನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ ಈ ವೇಳೆ ಬಾಲಕನ ಚಲನವಲನ ನಿಂತು ಹೋಗಿದೆ. ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಪೋಷಕರು, ಹಾಗೂ ಚಿಕ್ಕಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Cancer ಗುಣವಾಗುತ್ತೆ ಎಂದು ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ಮಹಿಳೆ… ಆಗಿದ್ದೇ ಬೇರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ