ಸುಲಿಗೆ ಹಣ ಪಾವತಿಸದ ಉದ್ಯಮಿಗಳಿಬ್ಬರನ್ನು ಗುಂಡಿಕ್ಕಿ ಕೊಲೆ
Team Udayavani, Jul 26, 2018, 4:37 PM IST
ಪ್ರತಾಪಗಢ, ಉತ್ತರ ಪ್ರದೇಶ : ಸುಲಿಗೆ ಹಣ ಪಾವತಿಸದಿರುವ ಕಾರಣಕ್ಕೆ ಇಲ್ಲಿನ ಕೊಹಂದೋರ್ ಪ್ರದೇಶದಲ್ಲಿ ಇಬ್ಬರು ಉದ್ಯಮಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಹಂತಕರು ಶ್ಯಾಂ ಸುಂದರ್ ಜೈಸ್ವಾಲ್ (55) ಮತ್ತು ಶ್ಯಾಮ್ ಮೂರತ್ ಜೈಸ್ವಾಲ್ (48) ಎಂಬ ಉದ್ಯಮಿ ಸಹೋದರರಿಬ್ಬರನ್ನು ಗುಂಡಿಕ್ಕಿ ಕೊಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಹೋದರ ಉದ್ಯಮಿಗಳು ಕಟ್ಟಡ ಉಪಕರಣಗಳ ಉದ್ಯಮ ನಡೆಸುತ್ತಿದ್ದರು. ಇವರಿಗೆ ಕಳೆದ ಕೆಲವು ದಿನಗಳಿಂದ ಸುಲಿಗೆ ಹಣದ ಫೋನ್ ಕರೆಗಳು ಬರುತ್ತಿದ್ದವು ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಈ ಘಟನೆಗಾಗಿ ಕೊಹಂದೋರ್ ಪೊಲೀಸ್ ಠಾಣೆಯ ಎಸ್ಎಚ್ಓ ನಾಗೇಂದ್ರ ಸಿಂಗ್ ನಗರ್ ಅವರನ್ನು ಅಮಾನತು ಮಾಡಲಾಗಿದೆ.