ಚಿಟ್ಟೆ ಪಾರ್ಕ್: ಯೋಗಿ ಗಿಫ್ಟ್
Team Udayavani, Feb 6, 2018, 7:45 AM IST
ಹೊಸದಿಲ್ಲಿ:ಉತ್ತರಪ್ರದೇಶಕ್ಕೆ ಮೊದಲ ಚಿಟ್ಟೆ ಉದ್ಯಾನವನವನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಉಡುಗೊರೆ ನೀಡಿದ್ದಾರೆ. ಜೀವವೈವಿಧ್ಯ ಸಂರಕ್ಷಣೆಗಾಗಿ ಕಾನ್ಪುರದಲ್ಲಿ ಈ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ.
ಚಿಟ್ಟೆ ಉದ್ಯಾನವನ 1 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಕಳೆದ ನವೆಂಬರ್ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಇದೇ ಮಾರ್ಚ್ನಲ್ಲಿ ಅದನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗುವುದು ಎಂದು ಕಾನ್ಪುರ ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.
ಈ ಉದ್ಯಾನವನದಲ್ಲಿ ಚಿಟ್ಟೆಗಳನ್ನು ಆಕರ್ಷಿಸಲು ಈಗಾಗಲೇ 100 ಬಗೆಯ ಹೂ ಗಿಡಗಳನ್ನು ಬೆಳೆಸಲಾಗಿದೆ. ಸುಮಾರು 50 ಜಾತಿಯ ಚಿಟ್ಟೆಗಳನ್ನು ಇಲ್ಲಿ ಈಗಾಗಲೇ ಸಂರಕ್ಷಿಸಲಾಗಿದೆ. ಚಿಟ್ಟೆಗಳನ್ನು ಆಕರ್ಷಿಸ ಲೆಂದೇ ಉದ್ಯಾನದ ಸುತ್ತಲೂ ಎಲ್ಲಾ ಋತು ಗಳಲ್ಲೂ ಹೂ ಬಿಡುವ 50ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಉದ್ಯಾನದ ಒಳಗೂ ಸದಾ ಕಾಲ ಹೂ ಬಿಡುವ 40 ಬಗೆಯ ಗಿಡಗಳನ್ನು ಬೆಳಸಲಾಗಿದೆ. ಇದರಿಂದ ವರ್ಷಪೂರ್ತಿ ಪ್ರವಾಸಿಗರೂ ಉದ್ಯಾನದ ಸೌಂದರ್ಯ ಕಣ್ತುಂಬಿ ಕೊಳ್ಳಬಹುದು ಎಂದು ಉದ್ಯಾನದ ನಿಯೋಜಿತ ವೈದ್ಯ ಡಾ. ಆರ್.ಕೆ. ಸಿಂಗ್ ಹೇಳಿದ್ದಾರೆ. ಕಳೆದ ನವೆಂಬರ್ನಲ್ಲಿ ಗುರು ಗ್ರಾಮದಲ್ಲೂ 15 ಎಕರೆ ವಿಸ್ತೀರ್ಣದ ಚಿಟ್ಟೆ ಉದ್ಯಾನಕ್ಕೆ ಶಿಲಾನ್ಯಾಸ ಮಾಡಲಾಗಿತ್ತು.