ಸಂಬಳ ಕೊಡಲು ದುಡ್ಡಿಲ್ಲ; ಬೇರೆ ಉದ್ಯೋಗ ಸೇರಿಕೊಳ್ಳಿ: ಚೋಕ್ಸಿ
Team Udayavani, Feb 24, 2018, 3:54 PM IST
ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 11,400 ಕೋಟಿ ರೂ. ಸಾಲ ವಂಚನೆ ಮಾಡಿರುವ ಹಗರಣದಲ್ಲಿ ವಿದೇಶಕ್ಕೆ ಪಲಾಯನ ಮಾಡಿರುವ ಓರ್ವ ಪ್ರಮುಖ ಆರೋಪಿ ಮತ್ತು ಗೀತಾಂಜಲಿ ಜೆಮ್ಸ್ ಪ್ರಮೋಟರ್ ಆಗಿರುವ ಮೆಹುಲ್ ಚೋಕ್ಸಿ ಅವರು ತನ್ನ ಕಂಪೆನಿಯ ಉದ್ಯೋಗಿಗಳಿಗೆ, “ನಿಮಗಿನ್ನು ಸಂಬಳ ಪಾವತಿಸಲು ಸಾಧ್ಯವಾಗುವುದಿಲ್ಲ; ಬೇರೆ ಉದ್ಯೋಗ ನೋಡಿಕೊಳ್ಳಿ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ಗೀತಾಂಜಲಿ ಜೆಮ್ಸ್ನ ಭಾರತೀಯ ಉದ್ಯೋಗಿಗಳಿಗೆ ನಿನ್ನೆ ಶುಕ್ರವಾರ ಮೆಹೂಲ್ ಚೋಕ್ಸಿ ಬರೆದಿರುವ ಪತ್ರದಲ್ಲಿ ಹೀಗೆ ಹೇಳಿದ್ದಾರೆ :
“ನಿಮಗೆ ಬಾಕಿ ಇರುವ ಹಣವನ್ನು ಪಾವತಿಸುವುದಕ್ಕಾಗಲೀ, ಮುಂಬರುವ ತಿಂಗಳ ಸಂಬಳವನ್ನು ಕೊಡುವುದಕ್ಕಾಗಲೀ ನಮಗೆ ಸಾಧ್ಯವಿಲ್ಲ. ನಮ್ಮ ಸಂಸ್ಥೆಯ ವಿವಿಧ ಬ್ಯಾಂಕ್ ಖಾತೆಗಳನ್ನು ತನಿಖಾಧಿಕಾರಿಗಳು ಅನುಚಿತ ಕ್ರಮವಾಗಿ ಸ್ತಂಭನಗೊಳಿಸಿದ್ದಾರೆ. ನಮ್ಮ ಮಳಿಗೆಗಳ ವಿದ್ಯುತ್ ಶುಲ್ಕ, ನಿರ್ವಹಣಾ ಖರ್ಚು ವೆಚ್ಚಗಳನ್ನು ಕೂಡ ನಿಭಾಯಿಸಲು ನಮಗೆ ಆಗಲಾದರು. ಆದುದರಿಂದ ನೀವೆಲ್ಲ ಬೇರೆ ಉದ್ಯೋಗಗಳನ್ನು ಕಂಡುಕೊಳ್ಳಿ ಎಂದು ವಿನಂತಿಸುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?