ಜೀವ ಬೆದರಿಕೆ ಕಾರಣ ತನಿಖೆಗೆ ದಿಲ್ಲಿಗೆ ಬರಲಾರೆ: NIAಗೆ ಉಮರ್ ಫಾರೂಕ್
Team Udayavani, Mar 11, 2019, 9:52 AM IST
ಶ್ರೀನಗರ : ತನಗೆ ಜೀವ ಬೆದರಿಕೆ ಇರುವ ಕಾರಣ ತನ್ನನ್ನು ದಿಲ್ಲಿಯ ಬದಲು ಇಲ್ಲಿಯೇ ಪ್ರಶ್ನಿಸಬೇಕು ಎಂದು ಸೌಮ್ಯವಾದಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮೀರ್ವೆಜ್ ಉಮರ್ ಫಾರೂಕ್ ಅವರು ರಾಷ್ಟ್ರೀಯ ತನಿಖಾ ದಳ (ಎನ್ಐಎ)ವನ್ನು ಕೋರಿದ್ದಾರೆ.
ಕಾಶ್ಮೀರದಲ್ಲಿ ಹವಾಲಾ ಮೂಲಕ ಉಗ್ರರಿಗೆ ಹಣ ಪೂರೈಸಲಾಗುತ್ತಿರುವ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ.
ಕಳೆದ ತಿಂಗಳಲ್ಲಿ ಎನ್ಐಎ ಜಮ್ಮು ಕಾಶ್ಮೀರದಲ್ಲಿ ಮೀರ್ವೆಜ್ ಸಹಿತ ಹಲವು ಪ್ರತ್ಯೇಕತಾವಾದಿಗಳ ಮೇಲೆ ಸರಣಿ ದಾಳಿ ನಡೆಸಿತ್ತು. ಆ ಪ್ರಕಾರ ದಿಲ್ಲಿಗೆ ಬಂದು ತನಿಖೆಗೆ ಹಾಜರಾಗುವಂತೆ ಎನ್ಐಎ ಮೀರ್ವೆಜ್ಗೆ ಆದೇಶಿಸಿತ್ತು.
ದಿಲ್ಲಿಗೆ ಬಂದು ತನಿಖೆಗೆ ಹಾಜರಾಗುವಂತೆ ಕಳೆದ ಮಾರ್ಚ್ 6ರಂದು ಎನ್ಐಎ ಬರೆದಿದ್ದ ಪತ್ರಕ್ಕೆ ಉತ್ತರವಾಗಿ ಮೀರ್ವೆಜ್ ಅವರ ವಕೀಲ, ಇಜಾಜ್ ಅಹ್ಮದ್ ಧಾರ್ ಅವರು, ದಿಲ್ಲಿಯಲ್ಲಿ ನನ್ನ ಕಕ್ಷಿದಾರರ ಭದ್ರತೆಗೆ ಬೆದರಿಕೆ ಇದೆ; ಹಾಗಾಗಿ ಅವರಿಗೆ ದಿಲ್ಲಿಗೆ ಬರುವುದು ಅಪಾಯಕಾರಿಯಾಗಿದೆ; ಆದುದರಿಂದ ಶ್ರೀನಗರದಲ್ಲೇ ತನಿಖೆ ನಡೆಸಬೇಕು ಎಂಬುದು ಅವರ ಕೋರಿಕೆಯಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ