ಕಾನ್ಶಿರಾಮ್ ಸ್ಮಾರಕ ಸರಕಾರಿ ಬಂಗಲೆಯ ತೆರವಿಲ್ಲ: ಮಾಯಾವತಿ
Team Udayavani, May 26, 2018, 10:46 AM IST
ಲಕ್ನೋ : “ನನಗೆ ಕೊಡಲಾಗಿದ್ದ ಸರಕಾರಿ ಬಂಗಲೆಯನ್ನು ನಾನು ಬಹುಜನ ಸಮಾಜ ಪಕ್ಷದ ಸ್ಥಾಪಕ ಹಾಗೂ ನನ್ನ ರಾಜಕೀಯ ದೇವರಾದ ಕಾನ್ಶಿ ರಾಮ್ ಸ್ಮಾರಕವನ್ನಾಗಿ ಪರಿವರ್ತಿಸುವುದರಿಂದ ಅದನ್ನು ನಾನು ಖಾಲಿ ಮಾಡಲಾರೆ’ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಉತ್ತರ ಪ್ರದೇಶ ಸರಕಾರ ತನಗೆ ಜಾರಿ ಮಾಡಿರುವ ಸರಕಾರಿ ಬಂಗಲೆ ತೆರವು ನೊಟೀಸಿಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ದಲಿತ ನಾಯಕಿ ಮಾಯಾವತಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಾನು ಬರೆದಿರುವ ಪತ್ರದಲ್ಲಿ ಮಾಲ್ ಅವೆನ್ಯೂದಲ್ಲಿನ 13ಎ ನಂಬರ್ ಸರಕಾರಿ ಬಂಗಲೆಯನ್ನು 2011ರಲ್ಲೇ ತಾನು ಕಾನ್ಶಿ ರಾಮ್ ಸ್ಮಾರಕವಾಗಿ ಪರಿವರ್ತಿಸಿರುವುದರಿಂದ ಅದನ್ನು ತೆರವುಗೊಳಿಸಲಾರೆ ಎಂದು ಉತ್ತರಿಸಿರುವುದಾಗಿ ಹೇಳಿದರು.
ಕಾನ್ಶಿ ರಾಮ್ ಸ್ಮಾರಕವಾಗಿರುವ ಆ ಬಂಗಲೆಯಲ್ಲಿ ತಾನು ತನ್ನ ವಾಸ್ತವ್ಯಕ್ಕಾಗಿ ಕೇವಲ ಎರಡು ಕೋಣೆಗಳನ್ನು ಮಾತ್ರವೇ ಬಳಸುತ್ತಿದ್ದೇನೆ. ಬಂಗಲೆಯ ಉಸ್ತುವಾರಿ ಮತ್ತು ಭದ್ರತೆಗಾಗಿ ತನ್ನ ಉಪಸ್ಥಿತಿ ಇಲ್ಲಿ ಅಗತ್ಯವಿರುವುದರಿಂದ ತಾನಿಲ್ಲಿ ವಾಸವಾಗಿದ್ದೇನೆ ಎಂದು ಪತ್ರದಲ್ಲಿ ಮಾಯಾವತಿ ಹೇಳಿದ್ದಾರೆ.
ಅದಾಗಿ 2011ರ ಡಿಸೆಂಬರ್ನಲ್ಲಿ ತನಗೆ ಸರಕಾರದ ಎಸ್ಟೇಟ್ ಇಲಾಖೆ ಕೊಟ್ಟಿರುವ ನಂ.6, ಲಾಲ್ ಬಹಾದ್ದೂರ್ ಶಾಸ್ತ್ರೀ ಮಾರ್ಗ್ ಬಂಗಲೆಯನ್ನು ತಾನು ತೆರವು ಮಾಡಿ ಅದನ್ನು ಇಲಾಖೆಗೆ ಹಸ್ತಾಂತರಿಸುತ್ತೇನೆ ಎಂದು ಮಾಯಾವತಿ ಪತ್ರದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…