ಕ್ಯಾಶ್ಬ್ಯಾಕ್: ಜಿಎಸ್ಟಿ ಆಫರ್
Team Udayavani, Aug 5, 2018, 11:09 AM IST
*ಡಿಜಿಟಲ್ ಉತ್ತೇಜನಕ್ಕೆ ಮಹತ್ವದ ನಿರ್ಧಾರ
*ಆನ್ಲೈನ್ ಮೂಲಕ ವಹಿವಾಟು ಮಾಡಿದರೆ ಬಂಪರ್ ಕೊಡುಗೆ
*ಭೀಮ್, ರುಪೇ ಕಾರ್ಡ್ ಮೂಲಕವೇ ಹಣ ಪಾವತಿಗೆ ಪ್ರೋತ್ಸಾಹ
*ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆ ನಿವಾರಣೆಗೆ ಉಪ ಸಮಿತಿ ರಚನೆ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಗೆ ಮುಂದಾಗಿರುವ ಜಿಎಸ್ಟಿಮಂಡಳಿ, ಆನ್ಲೈನ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ. ಭೀಮ್ ಆ್ಯಪ್, ರುಪೇ ಕಾರ್ಡ್ ಮತ್ತು
ಯುಪಿಐ ಪಾವತಿ ವಿಧಾನದ ಮೂಲಕ ವಹಿವಾಟು ಮಾಡಿದಲ್ಲಿ ಶೇ.20ರಷ್ಟು ಕ್ಯಾಶ್ಬ್ಯಾಕ್ ನೀಡುವ ಕುರಿತಂತೆ ಶನಿವಾರ ಇಲ್ಲಿನ ವಿಜ್ಞಾನ ಭವನದಲ್ಲಿ ನಡೆದ ಜಿಎಸ್ಟಿ ಮಂಡಳಿಯ 29ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿರುವ ಜಿಎಸ್ಟಿ ಮಂಡಳಿ, ಯಾವ ರಾಜ್ಯಗಳು ಆಸಕ್ತಿ ವಹಿಸಿ ಮುಂದೆ ಬರುತ್ತವೆಯೋ, ಅವುಗಳಿಗೆ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಇದರ ಅಡಿಯಲ್ಲಿ ಒಟ್ಟಾರೆ ಜಿಎಸ್ಟಿ ಪಾವತಿಯ ಶೇ.20 ರಷ್ಟು ಅಥವಾ ಗರಿಷ್ಠ 100 ರೂ.ಗಳ ವರೆಗೆ ಕ್ಯಾಷ್ಬ್ಯಾಕ್ ಉತ್ತೇಜನ ಸಿಗಲಿದೆ ಎಂದು ಗೋಯಲ್ ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ಜಾರಿ ಮಾಡಿ, ಲಾಭ ಮತ್ತು ನಷ್ಟದ ಬಗ್ಗೆ
ಪರಾಮರ್ಶಿಸಿ ನಂತರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಭೀಮ್, ಯುಪಿಐ ಮತ್ತು ರುಪೇ ಕಾರ್ಡ್ ಬಳಸಿಕೊಂಡು ಆನ್ಲೈನ್ ಪಾವತಿಗೆ ಉತ್ತೇಜನ ನೀಡುವುದು, ಅದರಲ್ಲೂ ಸಣ್ಣಪುಟ್ಟ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಬಿಹಾರ ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ.
ಇನ್ಮುಂದೆ ಮೂರೇ ಹಂತ: ಈ ಮಧ್ಯೆ ಕೋಲ್ಕತಾದಲ್ಲಿ ಜಿಎಸ್ಟಿ ಕುರಿತಂತೆ ಮಾತನಾಡಿರುವ ಹಣಕಾಸು ಇಲಾಖೆಯ ಪ್ರಧಾನ ಸಲಹೆಗಾರ ಸಂಜೀವ್ ಸನ್ಯಾಲ್, ಮುಂದಿನ ದಿನಗಳಲ್ಲಿ ಮೂರು ಹಂತದ ಜಿಎಸ್ಟಿ ಮಾತ್ರ ಇರಲಿದೆ ಎಂದಿದ್ದಾರೆ. ಅಂದರೆ ಶೇ.5, ಶೇ.15 ಮತ್ತು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈಗಾಗಲೇ ಶೇ.5ರ ಹಂತವಿದ್ದು, ಮುಂದೆ ಶೇ.12 ಮತ್ತು ಶೇ.18 ವಿಲೀನಗೊಳಿಸಿ, ಶೇ.15ರ ಹಂತ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಹಾಗೆಯೇ ಶೇ.28 ಅನ್ನು ಶೇ.25ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದಿದ್ದಾರೆ. ಸದ್ಯ ಶೇ.5, ಶೇ.12, ಶೇ.18 ಮತು ಶೇ.28 ರ ನಾಲ್ಕು ಹಂತದ ತೆರಿಗೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ