ಸಿಬಿಐ ಮಾಜಿ ಮುಖ್ಯಸ್ಥನ ವಿರುದ್ಧವೇ ಸಿಬಿಐ ಕೇಸು!
Team Udayavani, Feb 21, 2017, 3:45 AM IST
ನವದೆಹಲಿ: ವಿವಾದಿತ ಮಾಂಸ ರಫ್ತುದಾರ ಮೊಯೀನ್ ಖುರೇಶಿ ಪರವಾಗಿ ವರ್ತಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಾಜಿ ಮುಖ್ಯಸ್ಥ ಅಮರ್ ಪ್ರತಾಪ್ ಸಿಂಗ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಜೊತೆಗೆ ಅಮರ್ ಅವರ ನಿವಾಸಕ್ಕೆ ದಾಳಿ ಮಾಡಿ ತಪಾಸಣೆ ನಡೆಸಿದೆ. ಸಂಸ್ಥೆಯ ನಿವೃತ್ತ ಮುಖ್ಯಸ್ಥನ ಮೇಲೆ ಸಿಬಿಐ ದಾಳಿ ನಡೆಸಿರುವುದು ಇದೇ ಮೊದಲು.
ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಖುರೇಶಿ, ಅವರ ಸಿಬ್ಬಂದಿ ಆದಿತ್ಯ ಶರ್ಮಾ, ಟ್ರೈಮ್ಯಾಕ್ಸ್ ಗ್ರೂಪ್ ಆಫ್ ಕಂಪನೀಸ್ನ ಪ್ರದೀಪ್ ಕೊನೇರು ಮತ್ತು ಇತರ ಅನಾಮಿಕ ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಜೊತೆಗೆ ಆರೋಪಿಗಳಿಗೆ ಸೇರಿದ ನವದೆಹಲಿ, ಗಾಜಿಯಾಬಾದ್, ಚೆನ್ನೈ, ಹೈದ್ರಾಬಾದ್ನ ನಿವಾಸಗಳಿಗೆ ದಾಳಿ ಮಾಡಲಾಗಿದೆ.
ಖುರೇಶಿ ಜನರಿಂದ ಹಣ ಪಡೆದು, ಸರ್ಕಾರದ ಹಲವು ಅಧಿಕಾರಿಗಳು ಅವರ ಪರವಾಗಿ ಇರುವಂತೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?