ಲಾಕ್ಡೌನ್ ನಿರ್ಬಂಧ ಸಡಿಲಿಕೆ: ಕಾರ್ಮಿಕರ ಅಂತಾರಾಜ್ಯ ಸಂಚಾರಕ್ಕಿಲ್ಲ ಅವಕಾಶ
Team Udayavani, Apr 20, 2020, 7:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸೋಮವಾರದಿಂದ ದೇಶದ ಗ್ರಾಮೀಣ ಭಾಗಗಳಲ್ಲಿ ಕೆಲವು ವಲಯಗಳಿಗೆ ಲಾಕ್ಡೌನ್ ನಿರ್ಬಂಧ ಸಡಿಲಿಕೆ ಉಂಟಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ. ಅದರ ಪ್ರಕಾರ…
– ವಲಸೆ ಕಾರ್ಮಿಕರು ಯಾವ ರಾಜ್ಯದಲ್ಲಿ ನೆಲೆಸಿದ್ದಾರೋ ಅಲ್ಲಿಯೇ ಅವರಿಗೆ ಸಂಚಾರಕ್ಕೆ ಅವಕಾಶ. ಸ್ಥಳೀಯ ಆಡಳಿತದ ವ್ಯಾಪ್ತಿಯಲ್ಲಿ ಕೆಲಸಕ್ಕಾಗಿ ನೋಂದಣಿ ಮಾಡಿಸಬೇಕು. ಕಾರ್ಮಿಕರ ಕೌಶಲ್ಯವನ್ನು ಗಮನಿಸುವಂಥ ಕಾರ್ಯಕ್ರಮ ಹಮ್ಮಿಕೊಂಡು ಆ ಕಾರ್ಮಿಕರು ಯಾವ ಕಾಮಗಾರಿಗೆ ಸೂಕ್ತ ಎಂಬುದನ್ನು ಗುರುತಿಸಿ, ಆಯಾ ಕಾಮಗಾರಿಗೆ ಅವರನ್ನು ನಿಯೋಜಿಸಬೇಕು.
– ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಾಮಗಾರಿಗಳಿಗೆ ಕೂಲಿಯಾಳುಗಳನ್ನು ಸಾಗಿಸುವ ಹೊಣೆಯನ್ನು ಜಿಲ್ಲಾಡಳಿತಗಳೇ ಹೊರಬೇಕು. ಕೂಲಿಯಾಳುಗಳು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಡೆಯಲ್ಲೇ ಕೆಲಸ ನಿರ್ವಹಿಸಲು ಬಯಸಿದರೆ ಹಾಗೂ ಅವರು ಬಯಸುವ ಕೆಲಸದ ಸ್ಥಳ ರಾಜ್ಯದೊಳಗೇ ಇದ್ದರೆ ಅವರನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.
– ವಲಸೆ ಕಾರ್ಮಿಕರಿಗೆ ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ.
– ನಿಗದಿತ ಪ್ರದೇಶಕ್ಕೆ ಬಸ್ಗಳಲ್ಲೇ ಕರೆದೊಯ್ಯಬೇಕು. ಕರೆದೊಯ್ಯುವ ಮುನ್ನ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.
– ಅವರನ್ನು ಕರೆದೊಯ್ಯುವ ಬಸ್ಗಳನ್ನು ಕ್ರಿಮಿನಾಶಕಗಳಿಂದ ಶುದ್ಧಗೊಳಿಸಿರಬೇಕು. ಅವರನ್ನು ಕೊಂಡೊಯ್ಯುವಾಗ ಬಸ್ನೊಳಗೆ ಕಾರ್ಮಿಕರ ನಡುವೆ ಅಂತರವಿರುವಂತೆ ಅವರನ್ನು ಕೂರಿಸಬೇಕು
– ಪ್ರತಿಯೊಬ್ಬ ಕೂಲಿಯಾಳನ್ನೂ ಸ್ಕ್ಯಾನಿಂಗ್ಗೆ ಒಳಪಡಿಸಬೇಕು. ಅವರು ಸೋಂಕಿತರಲ್ಲ ಎಂದು ಕಂಡುಬಂದರಷ್ಟೇ ಅವರನ್ನು ಕಾಮಗಾರಿಗೆ ಕರೆದೊಯ್ಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ