ಗರ್ಭಪಾತದ ಗರಿಷ್ಠ ಮಿತಿ ಹೆಚ್ಚಳ
Team Udayavani, Oct 14, 2021, 6:20 AM IST
ಹೊಸದಿಲ್ಲಿ: ಗರ್ಭಪಾತಕ್ಕೆ ಇರುವ ಗರಿಷ್ಠ ಕಾಲ ಮಿತಿಯನ್ನು 20ರಿಂದ 24 ವಾರಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ.ಗರ್ಭಪಾತ,ಕೇಂದ್ರ ಸರಕಾರ,
ಇದಕ್ಕಾಗಿ 2021ರ “ಮೆಡಿಕಲ್ ಟರ್ಮಿ ನೇಶನ್ ಆಫ್ ಪ್ರಗ್ನೆನ್ಸಿ ಆ್ಯಕ್ಟ್’ (ತಿದ್ದುಪಡಿ) ತರಲಾಗಿದ್ದು, ಸೀಮಿತ ವ್ಯಕ್ತಿಗಳಿಗೆ ಮತ್ತು ಸೀಮಿತ ಸಂದರ್ಭಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಕಟ್ಟುನಟ್ಟಾಗಿ ಸೂಚಿಸಲಾಗಿದೆ.
ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಸೂಚನೆ
ಹಳೆಯ ನಿಯಮಗಳನುಸಾರ, ಗರ್ಭ ಪಾತವನ್ನು ಗರ್ಭಧಾರಣೆ ಆರಂಭದಿಂದ 12 ವಾರಗಳ ಒಳಗಾಗಿ ಕೈಗೊಳ್ಳುವುದಿದ್ದರೆ ಅದಕ್ಕೆ ಒಬ್ಬ ವೈದ್ಯರ ನಿರ್ಧಾರ ಸಾಕಿತ್ತು. 12 ವಾರಗಳಿಂದ 20 ವಾರಗಳ ಅವಧಿಯಲ್ಲಿ ಗರ್ಭಪಾತ ಕೈಗೊಳ್ಳುವುದಿದ್ದರೆ ಅದಕ್ಕೆ ಇಬ್ಬರು ವೈದ್ಯರ ಒಪ್ಪಿಗೆ ಅಗತ್ಯವಿತ್ತು. ಹೊಸ ನಿಯಮದಡಿ, ಆಯಾ ರಾಜ್ಯಮಟ್ಟದಲ್ಲಿ ಗರ್ಭಪಾತವನ್ನು ನಿರ್ಧರಿಸಲೆಂದು ಪ್ರತ್ಯೇಕ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಬೇಕಿದ್ದು, ಆ ಮಂಡಳಿಯ ಅನುಮತಿ ಇದ್ದೇ ಗರ್ಭಪಾತ ಪ್ರಕ್ರಿಯೆ ನಡೆಸುವುದು ಕಡ್ಡಾಯವಾಗಲಿದೆ.
ಇದನ್ನೂ ಓದಿ:ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ
ಮೂರು ದಿನಗಳಲ್ಲಿ ನಿರ್ಧಾರ
ಯಾವುದೇ ತಾಯಿ, ತನ್ನ ಗರ್ಭಪಾತಕ್ಕೆ ಈ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಆಗ, ತಾಯಿ ಮತ್ತು ಗರ್ಭಸ್ಥ ಭ್ರೂಣದ ಸ್ಥಿತಿಗತಿಗಳನ್ನು, ಸಂಬಂಧಿಸಿದ ಇತರ ವರದಿಗಳನ್ನು ಸೂಕ್ತವಾಗಿ ಅಧ್ಯಯನ ಮಾಡುವ ಮಂಡಳಿಯ ತಜ್ಞರು ಗರ್ಭಪಾತ ಬೇಕೋ, ಬೇಡವೋ ಎಂಬ ಬಗ್ಗೆ ಅರ್ಜಿ ಸಲ್ಲಿಕೆಯಾದ ಮೂರು ದಿನಗಳಲ್ಲಿ ನಿರ್ಧಾರ ಪ್ರಕಟಿಸಬೇಕಿದೆ.
ಯಾರ್ಯಾರಿಗೆ ಅನ್ವಯ?
– ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದರೆ
– ನಿಷಿದ್ಧವಿರುವ ಸಂಬಂಧಗಳ ನಡುವೆ ನಡೆಯುವ ಲೈಂಗಿಕ ಸಂಪರ್ಕಗಳಿಂದ ಗರ್ಭಿಣಿಯಾದವರಿಗೆ
– ಅಪ್ರಾಪ್ತರಿಗೆ, ದಿವ್ಯಾಂಗರಿಗೆ, ಮಾನಸಿಕ ಅಸ್ವಸ್ಥೆಯರಿಗೆ
– ವಿಧವೆ ಹಾಗೂ ವಿಚ್ಛೇದಿತರಾಗಿದ್ದು ಮಗು ಜನನದಿಂದ ಸಮಾಜದಲ್ಲಿ ಸ್ಥಾನ ಮಾನ ಬದಲಾಗುವ ಭೀತಿ ಇರುವವರಿಗೆ
– ಗರ್ಭಸ್ಥ ಶಿಶುವಿಗೆ ಗಂಭೀರ ಸ್ವರೂಪದ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿದ್ದರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು