Myanmar ಸೇನಾನೆಲೆ ಸ್ಥಾಪಿಸುತ್ತಿದೆ ಚೀನ!

ಕೊಕೊ ದ್ವೀಪದಿಂದ ಭಾರತದ ಸೇನಾ ಕೇಂದ್ರಗಳ ಮೇಲೆ ನಿಗಾಕ್ಕೆ ಯತ್ನ

Team Udayavani, Jun 19, 2023, 6:40 AM IST

Myanmar ಸೇನಾನೆಲೆ ಸ್ಥಾಪಿಸುತ್ತಿದೆ ಚೀನ!

ನವದೆಹಲಿ: ಭಾರತದ್ದೇ ನೆರೆರಾಷ್ಟ್ರಗಳ ಸಹಕಾರ ಪಡೆದು ಭಾರತದ ಸುತ್ತ ಕೋಟೆಕಟ್ಟುವ ಚೀನದ ಹುನ್ನಾರ ಮತ್ತೊಮ್ಮೆ ಬಯಲಾಗಿದೆ. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಶುರುವಾಗಿರುವ ಈ ನಾಟಕ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಭಾರತದ ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಚೀನ ತನ್ನ ಸೇನಾನೆಲೆ ಸ್ಥಾಪಿಸುತ್ತಿದೆ. ಇದರ ಮೂಲಕ ಭಾರತದ ಮೇಲೆ ಸನಿಹದಿಂದ ಕಣ್ಗಾವಲಿಡಲು ಹೊರಟಿದೆ.

ಈ ಬಗ್ಗೆ ಭಾರತ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ಮ್ಯಾನ್ಮಾರ್‌ ಸೇನಾ ಆಡಳಿತ ಸೂಕ್ತ ಉತ್ತರ ನೀಡಿಲ್ಲ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.

ವಾಜಪೇಯಿ ಪ್ರಧಾನಿಯಾಗಿದ್ದಾಗ, ಜಾರ್ಜ್‌ ಫೆರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದರು. ಆಗ ಮ್ಯಾನ್ಮಾರ್‌ನ ಕೊಕೊ ದ್ವೀಪದಲ್ಲಿ ಚೀನ ತನ್ನ ಸೇನಾನೆಲೆ ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಬಲವಾಗಿ ಆಕ್ಷೇಪಿಸಲಾಗಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿನ ಚೀನ ಬೆಂಬಲಿಗರು ಅದನ್ನು ಅಲ್ಲಗಳೆದಿದ್ದರು ಎನ್ನಲಾಗಿದೆ.

ಅಲ್ಲಿ ನಡೆಯುತ್ತಿರುವುದೇನು?:
ಸದ್ಯ ಮ್ಯಾನ್ಮಾರ್‌ರನ್ನು ಸೇನಾ ಜನರಲ್‌ ಮಿನ್‌ ಆಂಗ್‌ ಎಚ್‌ಲೈಂಗ್‌ ಮುನ್ನಡೆಸುತ್ತಿದ್ದಾರೆ. ಆಂಗ್‌ ಸಾನ್‌ ಸೂಕಿಯನ್ನು ಕಿತ್ತೆಸೆದು ಮತ್ತೆ ಸೇನಾಡಳಿತ ಸ್ಥಾಪಿಸಿದ್ದರಿಂದ ಮ್ಯಾನ್ಮಾರ್‌ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಕಳೆದುಕೊಂಡಿದೆ. ಈ ಹಂತದಲ್ಲಿ ಚೀನ ಈ ದೇಶಕ್ಕೆ ಸಾವಿರಾರು ಕೋಟಿ ರೂ. ನೆರವು ನೀಡಿದೆ. ಅದನ್ನೇ ಬಳಸಿಕೊಂಡು ಕೊಕೊ ದ್ವೀಪದಲ್ಲಿ ಯುದ್ಧವಿಮಾನ ಸಂಚಾರಕ್ಕೆ ನೆರವಾಗಬಲ್ಲ ಒಂದು ರನ್‌ವೇ, ಬ್ಯಾರಕ್‌ಗಳು, ವಸತಿ ಕೇಂದ್ರ, ನಿಗಾಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಚೀನ ಪಾತ್ರವಿಲ್ಲ ಎಂದು ಮ್ಯಾನ್ಮಾರ್‌ ಹೇಳಿಕೊಂಡಿದ್ದರೂ, ಭಾರತದ ಗುಪ್ತಚರ ಇಲಾಖೆ ಆ ಪ್ರದೇಶದಲ್ಲಿ ಚೀನ ಯೋಧರ ಪ್ರಬಲ ಚಟುವಟಿಕೆಗಳಿಗೆ ಸಾಕ್ಷಿ ನೀಡಿದೆ!

ಕೊಕೊ ದ್ವೀಪದಿಂದ ಭಾರತದ ವಿಶಾಖಪಟ್ಟಣಂನಿಂದ 50 ಕಿ.ಮೀ. ದೂರದಲ್ಲಿರುವ ರಾಂಬಿಲ್ಲಿ ನೌಕಾನೆಲೆಯನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಹಾಗೆಯೇ ಒಡಿಶಾದ ಬಾಲಸೋರ್‌ ಮತ್ತು ಅಬ್ದುಲ್‌ ಕಲಾಂ ದ್ವೀಪದಲ್ಲಿರುವ ಅಣ್ವಸ್ತ್ರಸಜ್ಜಿತ, ಸಾಂಪ್ರದಾಯಿಕ ಕ್ಷಿಪಣಿ ಪರೀಕ್ಷಾ ಕೇಂದ್ರಗಳ ಮೇಲೂ ಚೀನ ನಿಗಾ ಇಡಬಲ್ಲದು! ಇದಕ್ಕೂ ಮಿಗಿಲಾಗಿ ಬಾಂಗ್ಲಾ-ಮ್ಯಾನ್ಮಾರ್‌-ಚೀನ ಕಾರಿಡಾರ್‌ ನಿರ್ಮಾಣಕ್ಕೆ ಬೀಜಿಂಗ್‌ ಹವಣಿಸುತ್ತಿದೆ. ಇವೆಲ್ಲ ಭಾರತಕ್ಕೆ ಆತಂಕ ಹುಟ್ಟಿಸಿದೆ.

ಟಾಪ್ ನ್ಯೂಸ್

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.