ಮುಲಾಯಂಗೆ ಕ್ಲೀನ್ಚಿಟ್
Team Udayavani, May 22, 2019, 6:12 AM IST
ಹೊಸದಿಲ್ಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಖೀಲೇಶ್ ಯಾದವ್ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ತಂದೆ, ಮಗನ ವಿರುದ್ಧ ಕೇಸು ದಾಖಲಿಸಲು ಯಾವುದೇ ಸಮರ್ಪಕ ಸಾಕ್ಷ್ಯಾಧಾರ ಸಿಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಸಿಬಿಐ ತಿಳಿಸಿದೆ. ಇಬ್ಬರ ವಿರುದ್ಧ 2005ರಲ್ಲಿ ಕೇಸು ದಾಖಲಿಸಲಾಗಿತ್ತು. 2013ರಲ್ಲೇ ಸಾಕ್ಷ್ಯ ದೊರಕದ ಕಾರಣ ಕೇಸನ್ನು ಸಮಾಪ್ತಿಗೊಳಿಸಲಾಗಿತ್ತು. ಬಳಿಕ ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಸುಪ್ರೀಂಗೆ ಕಾಂಗ್ರೆಸ್ನ ಕಾರ್ಯಕರ್ತ ವಿಶ್ವನಾಥ್ ಚತುರ್ವೇದಿ ಅರ್ಜಿ ಸಲ್ಲಿಸಿದ್ದರು.