ಅಟಲ್ ಸೇತುವೆಯ ಕಂಬ ಏರಿದ ವ್ಯಕ್ತಿ ; ಕೆಳಗೆ ಇಳಿಯಲು ಹರಸಾಹಸ
Team Udayavani, Oct 7, 2022, 10:25 PM IST
ಪಣಜಿ: ಪಣಜಿಯ ಮೆರ್ಶಿ ಸರ್ಕಲ್ ಬಳಿ ಶುಕ್ರವಾರ ಬೆಳಗ್ಗೆ ಅಟಲ್ ಸೇತುವೆಯ ಕಂಬವನ್ನು ವ್ಯಕ್ತಿಯೊಬ್ಬರು ಹತ್ತಿದ್ದನ್ನು ನಾಗರಿಕರು ಗಮನಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಈ ವ್ಯಕ್ತಿಯು ಕೆಳಗೆ ಇಳಿಯಲು ಹರಸಾಹಸ ಪಡಬೇಕಾಯಿತು, ಕೊನೆಗೆ ಕ್ರೇನ್ ಸಹಾಯದಿಂದ ಆತನನ್ನು ಕೆಳಕ್ಕಿಳಿಸಲಾಯಿತು.
ಮೆರ್ಶಿಯಲ್ಲಿ ವ್ಯಕ್ತಿಯೊಬ್ಬ ಅಟಲ್ ಸೇತುವೆಯ ಕಂಬವನ್ನು ಹತ್ತಿರುವುದನ್ನು ನಾಗರಿಕರು ಗಮನಿಸಿದ್ದಾರೆ. ಇದನ್ನು ಕಂಡ ನಾಗರಿಕರು ಗಾಬರಿಗೊಂಡರು. ಸ್ವಲ್ಪ ಸಮಯದ ನಂತರ, ಕ್ರೇನ್ ಸಹಾಯದಿಂದ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಈ ವ್ಯಕ್ತಿಯ ಹೆಸರು ಇನ್ನೂ ತಿಳಿದುಬಂದಿಲ್ಲ. ಅಲ್ಲದೆ, ಅವರು ಇಂತಹ ಕೃತ್ಯ ಎಸಗಿರುವ ನಿಖರ ಉದ್ದೇಶವೇನು? ಇದೂ ಸ್ಪಷ್ಟವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಕೆಲ ದಿನಗಳ ಹಿಂದೆ ಇಂದಹದ್ದೇ ಘಟನೆ ನಡೆದಿತ್ತು.ಏತನ್ಮಧ್ಯೆ, ಸೆಪ್ಟೆಂಬರ್ 13 ರಂದು ಮಹಿಳೆ ಸ್ನೇಹಾ ನಾಯಕ್ ದಾಬೋಲಿಯಲ್ಲಿ ಗ್ರೇಡ್ ಸಪರೇಟರ್ ಕಂಬವನ್ನು ಏರಿದ್ದರು. ದಾಬೋಲಿ ಮೇಲ್ಸೇತುವೆ ಬಳಿಯ ಗ್ರೇಡ್ ಸಪರೇಟರ್ ಕಂಬದಲ್ಲಿ ಮಹಿಳೆಯನ್ನು ಕೆಲವು ಟ್ಯಾಕ್ಸಿ ಚಾಲಕರು ಗಮನಿಸಿ ಕೂಡಲೇ ವಾಸ್ಕೋ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಕಂಬದ ಮೇಲೆ ಕುಳಿತಿದ್ದ ಮಹಿಳೆಯನ್ನು ಏಣಿ ಇಟ್ಟು ಕೆಳಗೆ ಇಳಿಸಲಾಗಿತ್ತು. ಕೆಳಗಿಳಿದ ಬಳಿಕ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲಸ ಕೊಡಿಸುವುದಾಗಿ ಹೇಳಿ ಯಾರೋ ಅಲ್ಲಿಗೆ ಕರೆತಂದಿದ್ದರು. ಈಕೆ ಕಾರವಾರ ಮೂಲದವಳಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್