ಶೀಘ್ರವೇ ಸರ್ಕಾರಿ ನೌಕರಿಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಪ್ರಮೋದ್ ಸಾವಂತ್
Team Udayavani, Oct 9, 2021, 4:26 PM IST
ಪಣಜಿ: ರಾಜ್ಯದಲ್ಲಿ ಸರ್ಕಾರಿ ನೌಕರಿಯ 8000 ಖಾಲಿ ಹುದ್ದೆಗಳಿಗಾಗಿ ಜಾಹೀರಾತು ನೀಡಲಾಗಿದ್ದು, ಈ ಪೈಕಿ 2000 ಸರ್ಕಾರಿ ನೌಕರಿಯನ್ನು ಕೂಡಲೇ ಭರ್ತಿ ಮಾಡಲು ಇನ್ನೊಂದು ವಾರದಲ್ಲಿ ಜಾಹೀರಾತು ನೀಡಲಾಗುವುದು. ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೊಳ್ಳುವ ಮುನ್ನ ಈ ಖಾಲಿ ಹುದ್ಧೆಯನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಸರ್ಕಾರಿ ನೌಕರಿ ವಿಷಯಕ್ಕೆ ಸಂಬಂಧಿಸಿದಂತೆ ಪಣಜಿಯಲ್ಲಿ ಬೈಠಕ್ ನಡೆಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ನೀಡಿದ ಭರವಸೆಯಂತೆಯೇ ಇದುವರೆಗೂ 8000 ಹುದ್ದೆ ಭರ್ತಿಗಾಗಿ ಜಾಹೀರಾತು ನೀಡಲಾಗಿದೆ. ಇನ್ನು ಎರಡು ಸಾವಿರ ಹುದ್ಧೆ ಭರ್ತಿಗಾಗಿ ಇನ್ನೊಂದು ವಾರದಲ್ಲಿ ಜಾಹೀರಾತು ನೀಡಿ ನೌಕರಿ ಭರ್ತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
ಕೇಂದ್ರ ಸರ್ಕಾರವು ಗೋವಾ ಮುಕ್ತಿ ದಿನದ 60 ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಗೋವಾಕ್ಕೆ 300 ಕೋಟಿ ರೂಗಳನ್ನು ಮಂಜೂರು ಮಾಡಿದೆ. ಈ ಪೈಕಿ 150 ಕೋಟಿ ರೂ ಹಣ ನಮ್ಮ ಕೈ ಸೇರಿದೆ. ಈ ನಿಧಿಯಿಂದ ಪಂಚಾಯತಿಯ ಹಲವು ಯೋಜನೆಗಳಿಗೆ 50 ಕೋಟಿ ರೂ ಮತ್ತು ಪಾಲಿಕೆಗಳಿಗಾಗಿ 1 ಕೋಟಿ ರೂ ನಿಧಿಯನ್ನು ಡಿಸೆಂಬರ್ 19 ರ ಒಳಗಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!