![modi (4)](https://www.udayavani.com/wp-content/uploads/2024/07/modi-4-4-415x256.jpg)
ಬನ್ನಿ, ನಮ್ಮೆಲ್ಲರನ್ನೂ ಕೊಂದುಬಿಡಿ!
Team Udayavani, Oct 30, 2018, 8:35 AM IST
![mir-imtiyaz.png](https://www.udayavani.com/wp-content/uploads/2018/10/30/mir-imtiyaz-620x349.png)
ಶ್ರೀನಗರ: ಕಾಶ್ಮೀರವನ್ನು ಅಪಾರವಾಗಿ ಪ್ರೀತಿಸಿದ ವ್ಯಕ್ತಿಯನ್ನು ನೀವು ಕೊಂದಿದ್ದೀರಿ. ಬನ್ನಿ, ನಮ್ಮೆಲ್ಲರನ್ನೂ ಕೊಂದು ಬಿಡಿ…! ಹೀಗೆ ಹೇಳಿದ್ದು ಹುತಾತ್ಮ ಯೋಧ ಮೀರ್ ಇಮಿ¤ಯಾಜ್ನ ಸಂಬಂಧಿಕರು. ಜಮ್ಮು ಕಾಶ್ಮೀರದಲ್ಲಿ ರವಿವಾರ ಉಗ್ರರಿಗೆ ಗುರುತು ಹಿಡಿಯದಂತೆ ಗಡ್ಡ ಬೋಳಿಸಿ ಕೊಂಡು ತಂದೆ ತಾಯಿಯನ್ನು ನೋಡಲೆಂದು ಮನೆಗೆ ಬರುತ್ತಿದ್ದ ಇಮಿ¤ಯಾಜ್ರನ್ನು ಉಗ್ರರು ಹತ್ಯೆಗೈದಿದ್ದರು. ಈ ಪತ್ರ ಅತ್ಯಂತ ಭಾವುಕ ವಾಗಿದ್ದು, ಮೀರ್ ಇಮಿ¤ಯಾಜ್ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.
ತನ್ನ ಸೋದರ ಹಾಗೂ ಸೋದರಿಗೆ ಬೆಂಬಲವಾಗಿ ನಿಂತಿದ್ದ ಏಕೈಕ ವ್ಯಕ್ತಿಯನ್ನು ನೀವು ಸಾಯಿಸಿದ್ದೀರಿ. ಸೂಫಿ, ಕಾರ್ಲ್ ಮಾರ್ಕ್ಸ್ ಬಗ್ಗೆ ಅಪಾರವಾಗಿ ಓದಿಕೊಂಡಿದ್ದ ವ್ಯಕ್ತಿಯನ್ನು ನೀವು ಹತ್ಯೆಗೈದಿದ್ದೀರಿ. ಕಾಶ್ಮೀರವನ್ನು ಪ್ರೀತಿಸುವ ಮತ್ತು ಕಾಶ್ಮೀರದ ಜನರನ್ನು ಪ್ರೀತಿಸುವ ಹಾಗೂ ಖುಷಿಯ ಕಾಶ್ಮೀರವನ್ನು ನೋಡಲು ಬಯಸಿದ್ದ ವ್ಯಕ್ತಿಯನ್ನು ನೀವು ಸಾಯಿಸಿದ್ದೀರಿ. ಅವನನ್ನು ಕೊಂದ ನೀವು ಯಾಕೆ ನಮ್ಮನ್ನೂ ಕೊಲ್ಲಲಿಲ್ಲ. ಅವನಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
5 ಯೋಧರಿಗೆ ಗಾಯ: ಶ್ರೀನಗರದ ಹೊರ ಭಾಗದಲ್ಲಿ ಪಂಥ ಚೌಕದ ಬಳಿ ಉಗ್ರರ ದಾಳಿಗೆ ಐವರು ಬಿಎಸ್ಎಫ್ ಯೋಧರಿಗೆ ಗಾಯವಾಗಿದೆ. ಸಂಜೆ ಸುಮಾರು 6 ಗಂಟೆಗೆ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಾರಿ ಶೋಧ ಕಾರ್ಯ ನಡೆಸಿದೆ.
ಪಾಕ್ ಸೇನಾ ನೆಲೆಗಳಿಗೆ ಗುರಿ: ಪೂಂಚ್ ಹಾಗೂ ಝಲ್ಲಾಸ್ನಲ್ಲಿ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸು ತ್ತಿರುವ ಪಾಕ್ ಸೇನೆಯ ಆಡಳಿತ ಕಚೇರಿಗಳ ಮೇಲೆ ಭಾರತೀಯ ಸೇನೆ ಗುರಿಯಿಟ್ಟಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಈ ಕಚೇರಿಯಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಖೂರಟ್ಟಾ ಹಾಗೂ ಸಮಾನಿಯಲ್ಲಿ ದಾಳಿ ನಡೆಸಲಾಗಿದೆ.
ಶವಯಾತ್ರೆಯಲ್ಲಿ ಬಂದೂಕು
ಕಳೆದ ವಾರ ಹತನಾದ ಉಗ್ರನ ಶವಯಾತ್ರೆಯಲ್ಲಿ ಆತನ ಬೆಂಬಲಿಗರು ಬಂದೂಕು ಝಳಪಿಸಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವರು ಗನ್ ಹಿಡಿದುಕೊಂಡು ಶವಯಾತ್ರೆಯಲ್ಲಿ ಭಾಗವಹಿಸಿದ್ದರು. ಇವರನ್ನು ಪೊಲೀಸರು ಗುರುತಿಸಿದ್ದು, ಶವಯಾತ್ರೆಯಲ್ಲಿ ಸ್ಥಳೀಯರ ಜೊತೆಗೆ ಉಗ್ರರೂ ಸೇರಿಕೊಂಡಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
![modi (4)](https://www.udayavani.com/wp-content/uploads/2024/07/modi-4-4-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.