ಕೇದಾರನಾಥದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದ ಕಾಂಗ್ರೆಸ್‌


Team Udayavani, Oct 21, 2017, 6:15 AM IST

1-2-20101-pti10_20_2017_000.jpg

ಕೇದಾರನಾಥ: ಜಲಪ್ರಳಯದಿಂದಾಗಿ 2013ರಲ್ಲಿ ಹಾನಿ ಗೀಡಾಗಿದ್ದ ಕೇದಾರನಾಥ ಪವಿತ್ರ ಕ್ಷೇತ್ರದ ಪುನರುತ್ಥಾನದ ಕಾರ್ಯಕ್ಕೆ  ಕೈ ಜೋಡಿಸುವ ತಮ್ಮ ಪ್ರಯತ್ನವನ್ನು ಆಗ, ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಆರಂಭದಲ್ಲೇ ಚಿವುಟಿ ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. 

ಹಿಮಾಲಯದಲ್ಲಿರುವ ಈ ಪವಿತ್ರ ತಾಣಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಐದು ಬೃಹತ್‌ ಯೋಜನೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವು ಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೌಕರ್ಯ ನೀಡುವ ಯೋಜನೆ ಒಂದಾದರೆ, ಮತ್ತೂಂದು ಪ್ರವಾಹ ದಿಂದ ವರ್ಷಕ್ಕೊಮ್ಮೆ ಉಕ್ಕಿ ಹರಿಯುವ ಮಂದಾಕಿನಿ ಹಾಗೂ ಸರಸ್ವತಿ ನದಿಗಳ ಸಮೀಪವೇ ಹಾದು ಹೋಗುವ ಕೇದಾರ ನಾಥ ಸಂಪರ್ಕ ರಸ್ತೆಯನ್ನು ರಕ್ಷಿಸುವ ರಕ್ಷಣಾ ಗೋಡೆ, ಆದಿ ಗುರು ಶಂಕರಾಚಾರ್ಯರ ಸಮಾಧಿಯುಳ್ಳ ಕಟ್ಟಡಗಳ ಜೀರ್ಣೋದ್ಧಾರಗಳೂ ಸೇರಿವೆ. ಇದೇ ವರ್ಷ ಮೇ ತಿಂಗ ಳಲ್ಲೂ ಇಲ್ಲಿಗೆ ಆಗಮಿಸಿದ್ದ ಮೋದಿ, ಆಗಲೂ ಐದು ಮಹತ್ವದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 

ಶುಕ್ರವಾರ, ಇಲ್ಲಿನ ಮಹಾಶಿವನ ದೇಗುಲದಲ್ಲಿ ರುದ್ರಾಭಿ ಷೇಕದಲ್ಲಿ ಅವರು ಪಾಲ್ಗೊಂಡರು. ಬಳಿಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ಹಿಮಾಲಯದ ತಪ್ಪಲಿನಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿರುವುದರಿಂದ ತಮ್ಮಲ್ಲಿನ ದೇಶಸೇವೆಯ ಇಚ್ಛಾಶಕ್ತಿ ಇಮ್ಮಡಿಸಿದೆ ಎಂದು ಬಣ್ಣಿಸಿದರು. ಆನಂತರ, ತಮ್ಮ ಮಾತುಗಳನ್ನು ಕಾಂಗ್ರೆಸ್‌ ಕಡೆಗೆ ತಿರುಗಿಸಿದ ಅವರು, 2013ರಲ್ಲಿ ಪ್ರವಾಹಕ್ಕೆ ತುತ್ತಾಗಿ ತೀವ್ರವಾಗಿ ಹಾನಿಗೀಡಾಗಿದ್ದ ಕೇದಾರನಾಥ್‌ನ ಜೀರ್ಣೋದ್ಧಾರಕ್ಕೆ ಯತ್ನಿಸಿದ್ದರ ಬಗ್ಗೆ ತಿಳಿಸಿದರು.

“”2013ರಲ್ಲಿ ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದೆ. ಆಗ, ಕೇದಾರನಾಥ್‌ಗೆ ಬಂದೊದಗಿದ ದುಸ್ಥಿತಿಗೆ ಮರುಗಿ, ಅಂದಿನ ಉತ್ತರಾಖಂಡ ಸಿಎಂ ಜತೆ ಮಾತನಾಡಿ, ದೇಗುಲ ಪುನರುತ್ಥಾನಕ್ಕೆ ಅಗತ್ಯ ನೆರವು ಕೊಡುವುದಾಗಿ ತಿಳಿಸಿದೆ. ಇಲ್ಲಿನ ಮುಖ್ಯ ದೇಗುಲದ ಸುತ್ತಲಿನ ಕಟ್ಟಡಗಳ ಮರು ನಿರ್ಮಾಣದ ಹೊಣೆಯನ್ನು ಗುಜರಾತ್‌ ಸರ್ಕಾರವೇ ಹೊರುವುದಾಗಿಯೂ ತಿಳಿಸಿದ್ದೆ” ಎಂದರು. 

“”ಮಾಧ್ಯಮಗಳಲ್ಲಿ ಈ ವಿಚಾರ ಬಿತ್ತರವಾದ ಕೂಡಲೇ ನವದೆಹಲಿಯಲ್ಲಿ ಸಂಚಲನ ಉಂಟಾಯಿತು. ಕೇದಾರನಾಥ ಪುನರುತ್ಥಾನದಲ್ಲಿ ನಾನು (ಮೋದಿ) ಕೈ ಜೋಡಿಸುವುದನ್ನು ರಾಜಕೀಯವಾಗಿ ತೆಗೆದುಕೊಂಡ ಯುಪಿಎ, ಉತ್ತರಾಖಂಡ ದಲ್ಲಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸಿಎಂ ವಿಜಯ ಬಹುಗುಣ (ಈಗ ಅವರು ಬಿಜೆಪಿಯಲ್ಲಿದ್ದಾರೆ) ಮೇಲೆ ಒತ್ತಡ ಹೇರಿ, ಆ ಬೃಹತ್‌ ಯೋಜನೆಯಿಂದ ನನ್ನನ್ನು ದೂರ ಇಡುವಂತೆ ನೋಡಿಕೊಂಡಿತು” ಎಂದು ಆರೋಪಿಸಿದರು.

ಬಾಬಾ ಇಚ್ಛೆ ಬೇರೆಯೇ ಆಗಿತ್ತು
ರಾಜಕೀಯಕ್ಕೆ ಬರುವುದಕ್ಕೂ ಮುನ್ನ ತಾವು ಕೇದಾರನಾಥ್‌ನ ಗರುಚಟ್ಟಿಯಲ್ಲಿ ಕಾಲ ಕಳೆದಿದ್ದನ್ನು ಮೋದಿ ನೆನಪಿಸಿಕೊಂಡರು. ಇಲ್ಲಿನ ಬಾಬಾ (ಶಿವ) ಅವರ ಪಾದತಲದಲ್ಲೇ ಅವರ ಸೇವೆ ಮಾಡಿಕೊಂಡು ಜೀವನವನ್ನು ಮುಡುಪಾಗಿಡಲು ನಿರ್ಧರಿಸಿದ್ದೆ. ಆದರೆ, ಬಾಬಾ ಅವರ ಇಚ್ಛೆ ಬೇರೆಯೇ ಆಗಿತ್ತು. ಅವರು ಹಾಗೆ ಇಚ್ಛೆ ಪಟ್ಟಿರಲಿಲ್ಲವೆಂದರೆ ನಾನು ಇಂದು 125 ಕೋಟಿ ಜನರ ಸೇವೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನನ್ನ ಈಗಿನ ಸೇವೆಯೇ ದೇವರ ಸೇವೆಯೆಂದು ತಿಳಿಯುತ್ತೇನೆ ಎಂದರು. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.