ಕುಡಿದು ಬಂದ ವರನ ಜತೆಗೆ ಮದುವೆಗೆ ಒಪ್ಪದ ಬಿಹಾರಿ ವಧು; ಮದುವೆ ರದ್ದು


Team Udayavani, Jan 19, 2019, 5:42 AM IST

wedding1-700.jpg

ಭಾಗಲ್ಪುರ : ತನ್ನನ್ನು ಮದುವೆಯಾಗಲಿದ್ದ ವರ ಮಹಾಶಯ ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾನೆ ಎಂಬುದನ್ನು ಅರಿತ ಬಿಹಾರದ ವಧು “ತಾನು ಎಷ್ಟು ಮಾತ್ರಕ್ಕೂ ಈ ಮದುವೆ ಮಾಡಿಕೊಳ್ಳುವುದಿಲ್ಲ’ ಎಂದು ದೃಢ ನಿರ್ಧಾರ ಪ್ರಕಟಿಸಿದ ಕಾರಣ ಮದುವೆಯೇ ರದ್ದಾದ ಘಟನೆ ನಡೆದಿದೆ. 

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಬಿಹಾರದಲ್ಲಿ ಕುಡಿತಕ್ಕೆ ಸಂಪೂರ್ಣ ನಿಷೇಧವಿದೆ. ಮದುವೆಗೆ ನಿರಾಕರಿಸಿದ ವಧುವಿನ ನಿರ್ಧಾರವನ್ನು ಆಕೆಯ ತಂದೆ, ತಾಯಿ, ಮನೆಯವರು, ಕುಟುಂಬದವರು ಮತ್ತು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.

ವೃತ್ತಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದು  ಕಂಠಪೂರ್ತಿ ಕುಡಿದು ಬಂದು ಹುಡುಗಿಯ ಕಡೆಯವರೊಂದಿಗೆ ಜಗಳ ಮಾಡಿ, ಹಲ್ಲೆ ನಡೆಸಿದ ವರನನ್ನು ಪೊಲೀಸರು ಬಂಧಿಸಿದ್ದಾರೆ.

ನಲಂದಾ ಜಿಲ್ಲೆಯಲ್ಲಿ  ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ತಿಲಕ್‌ಪುರ ಗ್ರಾಮದ ನಿವಾಸಿ ಉದಯ್‌ ರಜಕ ಎಂಬ ವರನು ತಾನು ವರಿಸಲಿದ್ದ ಅಕ್‌ಬರ್‌ಪುರ ಗ್ರಾಮದ ನಿವಾಸಿ ಯೋಗೇಂದ್ರ ರಜಕ ಅವರ ಮಗಳೊಂದಿಗೆ ವಿಧ್ಯುಕ್ತವಾಗಿ ಹೂಮಾಲೆಯನ್ನು ವಿನಿಮಯಿಸಿಕೊಳ್ಳಲು ಮೊನ್ನೆ ಗುರುವಾರ ರಾತ್ರಿ ಅವರ ಮನೆಗೆ ಹೋಗಿದ್ದಾಗ ಆತ ಕಂಠಪೂರ್ತಿ ಕುಡಿದು ಬಂದಿರುವುದು ಗೊತ್ತಾಯಿತು. 

ವರ ಮಾತ್ರವಲ್ಲದೆ ಆತನೊಂದಿಗೆ ದಿಬ್ಬಣದಲ್ಲಿ ಬಂದಿದ್ದ ಆತನ ಸಂಬಂಧಿಕರು ಕೂಡ ಕುಡಿದ ಅಮಲಿನಲ್ಲಿದ್ದರು. ಪರಿಣಾಮವಾಗಿ ವಧುವಿನ ತಾಯಿಯ ಅಣ್ಣ  ಪ್ರಸೂನ್‌ ಕುಮಾರ್‌ ರಜಕ್‌ ಅವರು ಈ ಬಗ್ಗೆ ತೀವ್ರ ಆಕ್ಷೇಪ ಎತ್ತಿದಾಗ ಎರಡೂ ಕಡೆಯವರಲ್ಲಿ ಅದು ಜಗಳಕ್ಕೆ ಕಾರಣವಾಯಿತು. ಹುಡುಗನ ಕಡೆಯವರು ಹುಡುಗಿಯ ಮಾವನ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿರುವ ಕಹಲ್‌ಗಾಂವ್‌  ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ದಿಲ್‌ನವಾಜ್‌ ಅಹ್ಮದ್‌ ತಿಳಿಸಿದರು. 

ವರ ಮತ್ತು ಆತನ ಕಡೆಯವರು ಕಂಠಪೂರ್ತಿ ಕುಡಿದು ಬಂದು ಗಲಾಟೆ ಮಾಡಿದುದನ್ನು ಅರಿತ ವಧು ಗಟ್ಟಿ ಮನಸ್ಸು ಮಾಡಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಖಡಕ್‌ ಆಗಿ ಹೇಳಿದಳು. 

ಗದ್ದಲ, ಹಲ್ಲೆಯ ಘಟನೆಯನ್ನು ಅನುಸರಿಸಿ ಪೊಲೀಸರು ವರನನ್ನು ಬಂಧಿಸಿದರು. ಅಬಕಾರಿ ಕಾಯಿದೆ ಪ್ರಕಾರ ಆತನ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆಗೆ ಮುಂದಾದರು. 

ಪೊಲೀಸರು ಹುಡುಗನ ತಂದೆಯನ್ನಾಗಲೀ, ದಿಬ್ಬಣದಲ್ಲಿದ್ದವರನ್ನಾಗಲೀ ಬಂಧಿಸಿಲ್ಲ.  

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.