ಪೊಲೀಸರಿಗೆ ಗುರುತಿನ ಬಲ; ಲೋಕಸಭೆಯಲ್ಲಿ ಅಪರಾಧ ಪ್ರಕ್ರಿಯೆ ವಿಧೇಯಕ ಅಂಗೀಕಾರ
Team Udayavani, Apr 5, 2022, 8:00 AM IST
ಹೊಸದಿಲ್ಲಿ: ಪ್ರತಿಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿದ್ದ ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ವಿಧೇಯಕಕ್ಕೆ ಸೋಮವಾರ ಲೋಕಸಭೆ ಅಂಗೀಕಾರ ನೀಡಿದೆ. ಸದನದಲ್ಲಿ ನಡೆದ ಚರ್ಚೆಗೆ ಉತ್ತರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ವ್ಯವಸ್ಥೆಯಿಂದ ಪೊಲೀಸರು ಕುಕೃತ್ಯ ಎಸಗುವವರಿಗಿಂತ ಹೆಚ್ಚು ಆಧುನಿಕವಾಗಿ ಯೋಚಿಸಲು ಸಾಧ್ಯವಾಗುತ್ತದೆ.
ಜತೆಗೆ ಅಪರಾಧಿಗಳಿಗಿಂತ ಹೆಚ್ಚು ಚಾಣಾಕ್ಷರಾಗಿ ಯೋಚಿಸಲು ನೆರವು ನೀಡಲಿದೆ ಎಂದರು. “ಅಪರಾಧಿಗಳ ಗುರುತು ದಾಖಲಿಸುವ ಕುರಿತಂತೆ ಹಳೇಯ ಕಾಲದ ವ್ಯವಸ್ಥೆ ಕೈಬಿಟ್ಟು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿರುವಂಥ, ನೂತನ ತಂತ್ರಜ್ಞಾನಾ ಧಾರಿತ ವ್ಯವಸ್ಥೆಯನ್ನು ಈ ವಿಧೇಯಕದ ಮೂಲಕ ನಾವು ಅಳವಡಿಸಿಕೊಳ್ಳಲಿದ್ದೇವೆ’ ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ
ಹೊಸ ವಿಧೇಯಕ ಮಾನವ ಹಕ್ಕುಗಳ ರಕ್ಷಕನಾಗಿಯೂ ಕೆಲಸ ಮಾಡಲಿದೆ ಎಂದೂ ಹೇಳಿದ್ದಾರೆ ಅಮಿತ್ ಶಾ. ಸಂಗ್ರಹಿಸಲಾಗಿರುವ ಅಪರಾಧಿಗಳ ಮಾಹಿತಿ ವಿವರ ದುರುಪಯೋಗವಾಗಲಿದೆ ಎಂಬ ಕಳವಳಕ್ಕೆ ಉತ್ತರಿಸಿದ ಅವರು, ಜಗತ್ತಿ ನಲ್ಲಿಯೇ ಮಾಹಿತಿ ಸಂಗ್ರಹವನ್ನು ಬಳಕೆ ಮಾಡುತ್ತಿದೆ. ಅದೇ ವಿಚಾರವನ್ನೂ ದೇಶದಲ್ಲೂ ಅಳವಡಿಸಲಾಗುತ್ತದೆ. ಎರಡೂವರೆ ವರ್ಷಗಳಿಂದ ಅದು ಬಳಕೆಯಲ್ಲಿದೆ ಎಂದರು. ಹೊಸ ವಿಧೇಯಕ 1920ರಲ್ಲಿ ಜಾರಿಗೆ ಬಂದ ಖೈದಿಗಳನ್ನು ಗುರುತಿಸುವಿಕೆ ಕಾಯ್ದೆಯ ಸ್ಥಾನದಲ್ಲಿ ಜಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ