Dalai Lama:13 ವರ್ಷಗಳ ಬಳಿಕ 3 ದಿನಗಳ ಭೇಟಿಗಾಗಿ ಸಿಕ್ಕಿಂಗೆ ಆಗಮಿಸಿದ ದಲೈ ಲಾಮಾ
Team Udayavani, Dec 11, 2023, 3:44 PM IST
ಗ್ಯಾಂಗ್ಟಕ್: ಟಿಬೆಟ್ನ ಆಧ್ಯಾತ್ಮಿಕ ಗುರು 14 ನೇ ದಲೈಲಾಮಾ ಟೆಂಜಿನ್ ಗ್ಯಾಟ್ಸೊ ಅವರು 13 ವರ್ಷಗಳ ನಂತರ ಮೂರು ದಿನಗಳ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಸಿಕ್ಕಿಂಗೆ ಆಗಮಿಸಿದರು.
ಪೂರ್ವ ಸಿಕ್ಕಿಂನ ಲಿಬಿಂಗ್ ಮಿಲಿಟರಿ ಹೆಲಿಪ್ಯಾಡ್ನಲ್ಲಿ ದಲೈ ಲಾಮಾ ಬೆಳಿಗ್ಗೆ 10.30 ರ ಸುಮಾರಿಗೆ ಬಂದಿಳಿದ ಅವರನ್ನು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಂಪುಟ ಸಚಿವರು ಮತ್ತು ಇತರ ಗಣ್ಯರು ಅವರನ್ನು ಸ್ವಾಗತಿಸಿದರು. ಅದಾದ ಬಳಿಕ ದಲೈಲಾಮಾ ಅವರನ್ನು ಹೆಲಿಪ್ಯಾಡ್ ಬಳಿಯ ವಿಸಿ ಗಂಜು ಲಾಮಾ ಗೇಟ್ನಿಂದ ರಾಷ್ಟ್ರೀಯ ಹೆದ್ದಾರಿ 10 ರ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು
ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಇಂದು ಹೋಟೆಲ್ನಲ್ಲಿ ದಲೈಲಾಮಾ ಅವರನ್ನು ಭೇಟಿಯಾಗಲಿದ್ದಾರೆ. ದಲೈ ಲಾಮಾ ಅವರು ಡಿಸೆಂಬರ್ 12 ರಂದು ರಾಜಧಾನಿ ಗ್ಯಾಂಗ್ಟಾಕ್ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಡಿಸೆಂಬರ್ 14 ರಂದು ಸಿಕ್ಕಿಂನಿಂದ ಹಿಂತಿರುಗಲಿದ್ದಾರೆ.
ದಲೈ ಲಾಮಾ ಅವರು ಈ ವರ್ಷದ ಅಕ್ಟೋಬರ್ನಲ್ಲಿ ಸಿಕ್ಕಿಂಗೆ ಭೇಟಿ ನೀಡಬೇಕಾಗಿತ್ತು ಅದಕ್ಕಾಗಿ ಸಿಕ್ಕಿಂ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿತ್ತು, ಆದರೆ ಅಕ್ಟೋಬರ್ 3 ಮತ್ತು 4 ರ ರಾತ್ರಿ ತೀಸ್ತಾ ಪ್ರವಾಹದಿಂದಾಗಿ ಅವರ ಕಾರ್ಯಕ್ರಮವನ್ನು ಮುಂದೂಡಲಾಯಿತು.
ದಲೈ ಲಾಮಾ ಅವರು 2010 ರಲ್ಲಿ ಸಿಕ್ಕಿಂಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು ಆ ಬಳಿಕ ಹದಿಮೂರು ವರ್ಷಗಳ ಬಳಿಕ ಭೇಟಿ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುಪ್ರೀಂ ತೀರ್ಪಿನಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ: ಪ್ರಮೋದ್ ಮುತಾಲಿಕ್
It is an immense honor and a profound privilege to extend my warmest welcome to His Holiness the 14th Dalai Lama at Libing Helipad, Gangtok.
The presence of His Holiness brings a radiant light of wisdom, compassion, and peace to our land, enriching our hearts and minds with His… pic.twitter.com/zNGN0bekDN
— Prem Singh Tamang (Golay) (@PSTamangGolay) December 11, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ