200 ವರ್ಷಗಳ ಬಳಿಕ ದೇಗುಲಕ್ಕೆ ದಲಿತರ ಪ್ರವೇಶ
ಭದ್ರತೆಗಾಗಿ 400 ಪೊಲೀಸರ ನಿಯೋಜನೆ!
Team Udayavani, Jan 4, 2023, 7:45 AM IST
ಚೆನ್ನೈ: ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ದೇವಾಲಯವೊಂದಕ್ಕೆ 200 ವರ್ಷಗಳ ಬಳಿಕ ಇದೇ ಮೊದಲಬಾರಿಗೆ ದಲಿತ ಸಮುದಾಯದ ಜನರು ಪ್ರವೇಶಿಸಿದ್ದು, ಅವರ ಭದ್ರತೆಗಾಗಿ 400ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು!
ವೈಕುಂಠ ಏಕಾದಶಿ ಪ್ರಯುಕ್ತ ಎಡುಥೈವನಾಥಂ ಗ್ರಾಮದ ದಲಿತ ಭಕ್ತಾದಿಗಳು ದೇವರಿಗೆ ಕಾಣಿಕೆ ಸಮರ್ಪಿಸಲು ವರದರಾಜ ಪೆರುಮಾಳ್ ದೇವಾಲಯಕ್ಕೆ ಮೆರವಣಿಗೆ ನಡೆಸಿದ್ದಾರೆ. ಹಣ್ಣು, ರೇಷ್ಮೆವಸ್ತ್ರ, ಮಾಲೆಗಳನ್ನು ಕೊಂಡೊಯ್ಯುತ್ತಿದ್ದ ಮೆರವಣಿಗೆಯಲ್ಲಿ 300ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಭಕ್ತರು ಭಾಗಿಯಾಗಿದ್ದರು.
200 ವರ್ಷಗಳಿಂದ ಈ ದೇಗುಲಕ್ಕೆ ದಲಿತ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, 2008ರಲ್ಲಿ ನಡೆದ ವಿವಾದದಿಂದಾಗಿ ದೇಗುಲದ ಹಬ್ಬಗಳಲ್ಲಿಯೂ ಭಾಗಿಯಾಗದಂತೆ ನಿರ್ಬಂಧ ವಿಧಿಸಲಾಗಿತ್ತು. ಇಷ್ಟು ವರ್ಷ ಈ ಉತ್ಸವ ದೇಗುಲದ ಆವರಣದ ಹೊರಗೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ದಲಿತ ಭಕ್ತಾದಿಗಳು ದೇಗುಲ ಪ್ರವೇಶಿಸಿದ್ದಾರೆ.
ದೇವಾಲಯ ಖಾಸಗಿ ಒಡೆತನದಲ್ಲಿದೆ ಎಂದುಕೊಂಡಿದ್ದ ಹಿನ್ನೆಲೆ ಈವರೆಗೆ ಯಾವುದೇ ದಲಿತರು ಈ ವಿಚಾರ ಸಂಬಂಧಿಸಿದಂತೆ ಧ್ವನಿ ಎತ್ತಿರಲಿಲ್ಲ. ಆದರೆ, ದೇಗುಲ ತಮಿಳುನಾಡು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು ಎಂದು ತಿಳಿದ ಬಳಿಕ, ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆದುಹಾಕಲು ನಿರ್ಧರಿಸಿ ಗ್ರಾಮದ ಎಲ್ಲ ದಲಿತ ಭಕ್ತಾದಿಗಳು ದೇಗುಲ ಪ್ರವೇಶಿಸಲು ನಿರ್ಧರಿಸಿದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ