Bharat Ratna ಸುದ್ದಿ ಕೇಳಿ ಭಾವುಕರಾದ ಅಡ್ವಾಣಿ ; ವಿಡಿಯೋ ನೋಡಿ
ರಾಮ ಮಂದಿರ ತಂದೆಯ ಜೀವಿತಾವಧಿಯಲ್ಲೇ ಸಾಧ್ಯವಾಯಿತು : ಜಯಂತ್ ಅಡ್ವಾಣಿ
Team Udayavani, Feb 3, 2024, 2:08 PM IST
ಹೊಸದಿಲ್ಲಿ: ಭಾರತ ಸರಕಾರ ಭಾರತ ರತ್ನ ಘೋಷಿಸಿದ ಸುದ್ದಿಯನ್ನು ಕೇಳಿ ಹಿರಿಯ ಬಿಜೆಪಿ ನಾಯಕ ಎಲ್ಕೆ ಅಡ್ವಾಣಿ ಅವರು ಭಾವನಾತ್ಮಕ ಕ್ಷಣಗಳಿಗೆ ಜಾರಿದ್ದು, ಆನಂದ ಭಾಷ್ಪ ಸುರಿಸಿದ್ದಾರೆ. ಪುತ್ರಿ ಪ್ರತಿಭಾ ಅಡ್ವಾಣಿ ಅವರು ತಂದೆಗೆ ಸಿಹಿತಿನ್ನಿಸಿ ಅಪ್ಪಿಕೊಂಡು ಸಂಭ್ರಮ ಅನುಭವಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಿಭಾ ಅಡ್ವಾಣಿ ” ಅಡ್ವಾಣಿ ಅವರು ತುಂಬಾ ಭಾವನಾತ್ಮಕ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಅವರು ಮಿತಭಾಷಿ. ಅವರ ಕಣ್ಣಲ್ಲಿ ನೀರು ಬಂತು. ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟ ಸಂತೋಷ ಮತ್ತು ತೃಪ್ತಿಯನ್ನು ಹೊಂದಿದ್ದಾರೆ. ನಾವು ತುಂಬಾ ಸಂತೋಷವಾಗಿದ್ದೇವೆ ಎಂದಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಕ್ಕಿರುವುದಕ್ಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಾ ಸಂತೋಷವಾಗಿದೆ. ತಂದೆಯವರಿಗೂ ತುಂಬಾ ಖುಷಿಯಾಗಿದೆ.ಜೀವನದ ಇಳಿ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ಅವರು ಪ್ರಧಾನಿ ಹಾಗೂ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದರು.
#WATCH | Daughter of veteran BJP leader LK Advani, Pratibha Advani shares sweets with him and hugs him.
Government of India announced Bharat Ratna for the veteran BJP leader. pic.twitter.com/zdYrGumkAq
— ANI (@ANI) February 3, 2024
ರಾಮ ಮಂದಿರ ತಂದೆಯ ಜೀವಿತಾವಧಿಯಲ್ಲಿ ಸಾಧ್ಯವಾಯಿತು : ಜಯಂತ್ ಅಡ್ವಾಣಿ
ಅಡ್ವಾಣಿ ಅವರ ಪುತ್ರ ಜಯಂತ್ ಅಡ್ವಾಣಿ ಅವರು ಪ್ರತಿಕ್ರಿಯಿಸಿ, ”ಇದು ನಮ್ಮ ಕುಟುಂಬ ಮತ್ತು ದೇಶದ ಎಲ್ಲರಿಗೂ ಬಹಳ ಸಂತೋಷದ ವಿಷಯ. ರಾಮಮಂದಿರ ಆಂದೋಲನ ಮತ್ತು ಪ್ರಾಣಪ್ರತಿಷ್ಠೆಯಲ್ಲಿ ಬಿಜೆಪಿ ನಾಯಕರ ಪಾತ್ರದ ಕುರಿತು ಅವರು ಹೇಳುತ್ತಾರೆ,ಇಂದು ದೇವಸ್ಥಾನವು ನಮ್ಮ ಮುಂದಿದೆ ಮತ್ತು ಇದು ಅವರ ಜೀವಿತಾವಧಿಯಲ್ಲೇ ಸಾಧ್ಯವಾಯಿತು. ಹಾಗಾಗಿ ನಾವು ತುಂಬಾ ಸಂತೋಷವಾಗಿದ್ದೇವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ