ಕಾವೇರಿ ವಿವಾದ: ಪುದುಚೇರಿ ಶಾಂತಿಯುತ ಬಂದ್
Team Udayavani, Apr 11, 2018, 12:12 PM IST
ಪುದುಚೇರಿ : ಪಿಎಂಕೆ ನೀಡಿರುವ ಕರೆಯನ್ವಯ ಪುದುಚೇರಿಯಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿ ಇಂದು ಬೆಳಗ್ಗಿನಿಂದ ಸಂಜೆಯ ತನಕ ಬಂದ್ ನಡೆಯುತ್ತಿದೆ.
ಪುದುಚೇರಿ ಆದ್ಯಂತ ಅಂಗಡಿ ಮುಂಗಟ್ಟು, ಕಚೇರಿ ಕಾರ್ಯಾಲಯಗಳು ಮುಚ್ಚಿವೆ. ಆಟೋ ರಿಕ್ಷಾ ಮತ್ತು ಬಸ್ ಸೇವೆ ತೀವ್ರವಾಗಿ ಬಾಧಿತವಾಗಿದೆ.
ಅಂತಾರಾಜ್ಯ ಸೇವೆಯ ತಮಿಳು ನಾಡು ಸರಕಾರಿ ಬಸ್ಸುಗಳು ಮಾತ್ರ ಎಂದಿನಂತೆ ಓಡಾಡುತ್ತಿವೆ. ಖಾಸಗಿ ಶಾಲೆಗಳು ಇಂದು ರಜೆ ನೀಡಿವೆ. ಸರಕಾರಿ ಶಾಲೆಗಳಲ್ಲಿ ಹಾಜರಾತಿ ಬಹಳ ಕಡಿಮೆ ಇದೆ. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಮಾಮೂಲಿಯಂತಿದೆ.