ಪಶ್ಚಿಮ ಬಂಗಾಳ : ರೋಡ್ ಶೋ ಗೆ ಇಳಿಯಲಿದ್ದಾರೆ ಮಮತಾ..?
Team Udayavani, Mar 14, 2021, 10:25 AM IST
ನವ ದೆಹಲಿ : ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಹೋಗುವ ಸಂದರ್ಭದಲ್ಲಿ ಗಾಯಗೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನಾಲ್ಕು ದಿನಗಳಾದ ಬಳಿಕ ಮತ್ತೆ ಇಂದು(ಆದಿತ್ಯವಾರ, ಮಾ.14) ಚುನಾವಣ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿಯನ್ನು ಪಕ್ಷ ತಿಳಿಸಿದೆ.
66 ವರ್ಷದ ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ಬೃಹತ್ ರೋಡ್ ಶೋ ನ ನೇತೃತ್ವವನ್ನು ವೀಲ್ ಚೇರ್ ಮೇಲೆ ಕುಳಿತುಕೊಂಡೇ ವಹಿಸಲಿದ್ದಾರೆ. ಹಾಗೂ ಹಜ್ಹ್ರಾ ದಲ್ಲಿ ಕೊನೆಗೊಳ್ಳುವ ರೋಡ್ ಶೋ ವನ್ನು ಉದ್ದೇಶಿಸಿ ಮಮತಾ ಮಾತನಾಡಲಿದ್ದಾರೆ ಎಂಬ ಮಾಹಿತಿ ದೊರಕಿದೆ.
ಓದಿ : ವೆಜ್ ಪಿಜ್ಜಾ ಬದಲು ನಾನ್-ವೆಜ್ ಪಿಜ್ಜಾ: 1 ಕೋಟಿ ರೂ. ಪರಿಹಾರಕ್ಕೆ ಮೊರೆ!
ಕಳೆದ ಗುರುವಾರ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಿಂದ ವೀಡಿಯೋ ಸಂದೇಶದಲ್ಲಿ ನಾಲ್ಕೈದು ಮಂದಿ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಿದ ನಂತರ, ಬ್ಯಾನರ್ಜಿ ತನ್ನ ಕಾರಿನ ಸುತ್ತಲು ಜನ ಸಮೂಹವೂ ತನ್ನನ್ನು ನೂಕಿದ ಕಾರಣದಿಂದಾಗಿ ಗಾಯವಾಗಿದೆ ಎಂದು ಹೇಳಿದ್ದರು.
ಚುನಾವಣಾ ಆಯೊಗಕ್ಕೆ ಸಲ್ಲಿಸಿದ ಪತ್ರದಲ್ಲಿ ತೃಣಮೂಲ ಕಾಂಗ್ರೆಸ್, ಇದು ಪಕ್ಷದ ವಿರುದ್ಧ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ನಡೆಸಿದ ಯೋಜಿತ ಪಿತೂರಿ ಎಂದು ಆರೋಪಿಸಿತ್ತು. ಇದು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಇನ್ನು, ಪ್ರತಿ ಪಕ್ಷ ಬಿಜೆಪಿ, ಇದು ಮಮತಾ ಅಧಿಕಾರ ಕಳೆದುಕೊಳ್ಳುವ ಭಯದಿಂದ ಜನರಿಂದ ಸಹನಾಭೂತಿ ಪಡೆಯಲು ನಡೆಸುತ್ತಿರುವ ಬೃಹನ್ನಾಟಕ ಎಂದು ಆರೋಪಿಸುತ್ತಿದೆ.
ಮಮತಾ ಬ್ಯಾನರ್ಜಿ ಅವರ ಎಡಗಾಲು ಮತ್ತು ಬೆರಳುಗಳಿಗೆ ತೀವ್ರವಾಗಿ ಮೂಳೆಗಲಿಗೆ ಪೆಟ್ಟಾಗಿದೆ. ಮುಂದೋಳು ಹಾಗೂ ಕುತ್ತಿಗೆ ಪೆಟ್ಟಾಗಿದೆ ಎಂದು ಆರಂಭಿಕ ವೈಧ್ಯಕೀಯ ವರದಿ ತಿಳಿಸಿತ್ತು. ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ