ಸೇವಾ ಶುಲ್ಕ ಮಾರ್ಗಸೂಚಿಗೆ ದೆಹಲಿ ಹೈಕೋರ್ಟ್ ತಡೆ
ಪಾರ್ಸೆಲ್ಗೆ ಸೇವಾ ಶುಲ್ಕ ಬೇಡ ಎಂದು ಮಧ್ಯಂತರ ಆದೇಶ
Team Udayavani, Jul 20, 2022, 9:49 PM IST
ನವದೆಹಲಿ: ದೇಶದ ಹೋಟೆಲ್ ಹಾಗೂ ರೆಸ್ಟಾರೆಂಟ್ಗಳಲ್ಲಿ ಗ್ರಾಹಕರ ಮೇಲೆ ಸೇವಾ ಶುಲ್ಕ ಹೇರಬಾರದೆಂದು ಕೇಂದ್ರ ಗ್ರಾಹಕ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಜು.4ರಂದು ಹೊರಡಿಸಿದ್ದ ಮಾರ್ಗಸೂಚಿಗೆ ದೆಹಲಿ ಹೈಕೋರ್ಟ್, ನ. 25ರವರೆಗೆ ತಡೆಯಾಜ್ಞೆ ನೀಡಿದೆ.
ಮಾರ್ಗಸೂಚಿಗಳ ವಿರುದ್ಧ ಭಾರತೀಯ ರಾಷ್ಟ್ರೀಯ ರೆಸ್ಟಾರಂಟ್ಗಳ ಸಂಘ ಹಾಗೂ ಭಾರತೀಯ ಹೋಟೆಲ್ಗಳು ಹಾಗೂ ರೆಸ್ಟಾರಂಟ್ಗಳ ಒಕ್ಕೂಟ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಮೇಲ್ಮನವಿಗಳ ಅನುಸಾರವಾಗಿ ಮಾರ್ಗಸೂಚಿಗಳನ್ನು ಪರಿಶೀಲನೆಗೊಳಿಸುವ ಅಗತ್ಯವಿದೆ ಎಂದು ಹೇಳಿದೆಯಲ್ಲದೆ, ಈ ಕುರಿತಂತೆ ಒಕ್ಕೂಟವು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿತು.
ಪಾರ್ಸೆಲ್ಗೆ ಶುಲ್ಕ ಬೇಡ:
ಇದರ ಜೊತೆಗೆ, ಮುಂದಿನ ಆದೇಶ ಹೊರಬೀಳುವವರೆಗೆ ಸೇವಾ ತೆರಿಗೆ ಮುಂದುವರಿಸಬಹುದು. ಆದರೆ, ಗ್ರಾಹಕರಿಗೆ ಪ್ರದರ್ಶಿಸಲಾಗುವ ಹೋಟೆಲ್ನ ಮೆನುವಿನಲ್ಲಿ ಯಾವ ತಿನಿಸಿಗೆ ಎಷ್ಟೆಷ್ಟು ಸೇವಾ ಶುಲ್ಕ ಎಂಬುದನ್ನು ಕಣ್ಣಿಗೆ ಕಾಣುವಂತೆ ನಮೂದಿಸಬೇಕು ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ. ಆದರೆ, ಹೋಟೆಲ್ನಿಂದ ಗ್ರಾಹಕರು ಕೊಂಡೊಯ್ಯುವ ಪಾರ್ಸೆಲ್ಗಳ ಮೇಲೆ ಸೇವಾ ಶುಲ್ಕ ಹೇರಕೂಡದು ಎಂಬ ಸೂಚನೆಯನ್ನೂ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ