ದಿಲ್ಲಿಯಲ್ಲಿ ಧೂಳಿನ ಬಿರುಗಾಳಿ, ಮಳೆ, ಮರಗಳು ಧರಾಶಾಯಿ
Team Udayavani, Jun 9, 2018, 7:24 PM IST
ಹೊಸದಿಲ್ಲಿ : ರಾಷ್ಟ ರಾಜಧಾನಿ ದಿಲ್ಲಿ ಇಂದು ಶನಿವಾರ ಧೂಳಿನ ಬಿರುಗಾಳಿಗೆ ತತ್ತರಿಸಿದೆ. ಇದನ್ನು ಅನುಸರಿಸಿ ರಾಜಧಾನಿಯ ಮೇಲೆ ಜಡಿಮಳೆಯ ಅಬ್ಬರ ಸಾಗಿದೆ. ಹಲವಾರು ಮರಗಳು ಧರೆಗುರುಳಿದಿವೆ. ರಸ್ತೆ ತುಂಬ ನೀರು ತುಂಬಿಕೊಂಡಿದೆ.
ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದ ಕನಿಷ್ಠ 18 ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿದೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ ದಿಲ್ಲಿಗರಿಗೆ ಕಟ್ಟೆಚ್ಚರದ ಮುನ್ಸೂಚನೆ ನೀಡಿದೆ. ಜಡಿ ಮಳೆಯೊಂದಿಗೆ ಪ್ರಬಲ ಗಾಳಿ ಬೀಸಲಿದ್ದು ಅದು ಧೂಳು ಮಿಶ್ರಿತವಾಗಿರುತ್ತದೆ ಎಂದು ಹೇಳಿದೆ. ಧೂಳು ಮಿಶ್ರಿತ ಬಿರುಗಾಳಿಯ ಪರಿಣಾಮವಾಗಿ ದಿಲ್ಲಿಯಲ್ಲಿ ಕಗ್ಗತ್ತಲು ಆವರಿಸಿಕೊಂಡಿದೆ. ದಿಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಇದೇ ರೀತಿಯ ಸ್ಥಿತಿ ನೆಲೆಗೊಂಡಿದೆ.
ಗಂಟೆಗೆ 70ರಿಂದ 80 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದ್ದು ಇದು ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಲಿದೆ; ಇದರೊಂದಿಗೆ ಮಳೆ ಕೂಡ ಬರಲಿದೆ; ಮುಂದಿನ ಮೂರು ತಾಸುಗಳಲ್ಲಿ ಈ ಸ್ಥಿತಿ ಇರುತ್ತದೆ ಎಂದು ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ