ಅಯೋಧ್ಯೆಯಲ್ಲಿ ಧರ್ಮಪರ್ವ
Team Udayavani, Dec 4, 2018, 11:54 AM IST
ಲಕ್ನೋ: ರಾಷ್ಟ್ರವ್ಯಾಪಿ ಹರಡಿರುವ ರಾಮಮಂದಿರ ನಿರ್ಮಾಣದ ಕಿಚ್ಚಿನ ಬಿಸಿ ದಿನೇ ದಿನೆ ತಾರಕಕ್ಕೇರುತ್ತಿದ್ದು, ರಾಮನ ಜನ್ಮಭೂಮಿಯಾದ ಅಯೋಧ್ಯೆ ಈಗ ಧಾರ್ಮಿಕ ಚಟುವಟಿಕೆಗಳ, ರಾಜಕೀಯ ಮೇಲಾಟಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ, ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ವತಿಯಿಂದ ಆಯೋಜಿಸಲಾಗಿದ್ದ ‘ಧರ್ಮ ಸಭಾ’ದ ಅನಂತರ ಬಲಪಂಥೀಯ ಸಂಘಟನೆಗಳಲ್ಲಿ ಉತ್ಸಾಹ ಮೇರೆಮೀರಿದ್ದು, ಬಾಬ್ರಿ ಮಸೀದಿ ಉರುಳಿಸಿದ ದಿನವಾದ ಡಿ. 6ನ್ನು ‘ಶೌರ್ಯ ದಿನ’ವೆಂದು, ಡಿ. 18ರಂದು ‘ಗೀತಾ ಜಯಂತಿ’ ಆಚರಿಸಲು ನಿರ್ಧರಿಸಿವೆ.
ಈ ಕಾರ್ಯಕ್ರಮಗಳ ವಿವರ ನೀಡಿದ ವಿಎಚ್ಪಿಯ ಅಯೋಧ್ಯೆ ಘಟಕದ ವಕ್ತಾರ ಶರದ್ ಶರ್ಮಾ, ‘ಧಾರ್ಮಿಕ ಕಾರ್ಯ ಕ್ರಮಗಳ ಅಂಗವಾಗಿ ಸರಸ್ವತಿ ದೇವಿಯ ಆರಾಧನೆ ಕೈಗೊಳ್ಳಲಾಗಿದೆ. ರಾಮಮಂದಿರ ನಿರ್ಮಾಣಕ್ಕಿರುವ ಅಡೆತಡೆಗಳ ನಿವಾರಣೆಗಾಗಿ ‘ಸರ್ವ ಬಾಧೆ ಮುಕ್ತಿ ಹವನ’ಗಳನ್ನು ನಡೆಸಲಾಗುತ್ತದೆ. ರಾಮಮಂದಿರಕ್ಕಾಗಿ ಜೀವತೆತ್ತ ಕರಸೇವಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಯೋಧ್ಯೆಯ 500 ಆಶ್ರಮಗಳಲ್ಲಿ ತುಪ್ಪದ ದೀಪ ಹಚ್ಚಲಾಗುತ್ತದೆ’ ಎಂದಿದ್ದಾರೆ.
ಡಿ. 9ರಂದು ದಿಲ್ಲಿಯಲ್ಲಿ ಧರ್ಮ ಸಂಸತ್ ಆಯೋಜಿಸಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. 2019ರ ಜ. 31 ಮತ್ತು ಫೆ. 1ರಂದು ನಡೆಯಲಿರುವ ಧರ್ಮಪರ್ವದಲ್ಲಿ ದೇಶದ 5,000 ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಈಶಾನ್ಯ ರಾಜ್ಯಗಳ ಹಿಂದೂ ಸ್ವಾಮೀಜಿಗಳಿಗೆ ವಿಶೇಷ ಆಹ್ವಾನವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ