ಹಿರಿಯ ನಾಗರಿಕರಿಗೆ ಏರ್ ಇಂಡಿಯಾದ ಭರಪೂರ ಕೊಡುಗೆ!
Team Udayavani, Dec 16, 2020, 6:32 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಮಾರಾಟಕ್ಕೆ ಸಿದ್ಧವಾಗಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಹಿರಿಯ ನಾಗರಿಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ. ಇದರನ್ವಯ ಟಿಕೆಟ್ ನಲ್ಲಿ ಶೇ. 50ರ ರಿಯಾಯಿತಿ ಘೋಷಿಸಿದೆ.
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಕುರಿತು ವಿಮಾನಯಾನ ಸಚಿವಾಲಯ ಬುಧವಾರ ಮಾಹಿತಿ ನೀಡಿದ್ದು, ಇದಕ್ಕಾಗಿ ಕೆಲವು ಷರತ್ತುಗಳನ್ನು ಸಹ ಇರಿಸಲಾಗಿದೆ. ಉದಾಹರಣೆಗೆ ಪ್ರಯಾಣದ ದಿನಕ್ಕೆ ಕನಿಷ್ಠ 7 ದಿನಗಳ ಮೊದಲು ಟಿಕೆಟ್ ಬುಕಿಂಗ್ ಮಾಡಿದರೆ ಮಾತ್ರ ಈ ಯೋಜನೆಯ ಪ್ರಯೋಜ ಪಡೆಯಬಹುದಾಗಿದೆ. ಇಂದು ಟಿಕೆಟ್ ಬುಕ್ಮಾಡಿ ನಾಳೆ ಅಥವಾ ನಾಳಿದ್ದು ಸಂಚರಿಸಿದರೆ ಇದರ ಸೌಲಭ್ಯ ಪಡೆಯಬಹುದಾಗಿದೆ.
ಈ ವಿನಾಯಿತಿಯ ಯೋಜನೆಯು ದೇಶೀಯ ವಿಮಾನಗಳಿಗಾಗಿ ಮಾತ್ರ ನೀಡಲಾಗಿದೆ. ಟಿಕೇಟ್ ಬುಕ್ಮಾಡುವಾಗ ಮತ್ತು ಚೆಕ್-ಇನ್ ಸಮಯದಲ್ಲಿ ID ತೋರಿಸಬೇಕು. ಈ ಸಂದರ್ಭ ನೀವು ಅದನ್ನು ತೋರಿಸಲು ವಿಫಲವಾದರೆ ಟಿಕೆಟ್ ಮೂಲ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದಲ್ಲದೇ ಮರುಪಾವತಿ ಇರುವುದಿಲ್ಲ. ಈ ಯೋಜನೆಯ ಸಂಪೂರ್ಣ ವಿವರಗಳನ್ನು ಏರ್ ಇಂಡಿಯಾದ ವೆಬ್ಸೈಟ್ನಲ್ಲಿ ನೀಡಲಾಗಿದೆ.
ಭಾರತೀಯ ಪ್ರಜೆಯಾಗಿದ್ದು, 60 ವರ್ಷಗಳ ಮೇಲೆ ಇರಬೇಕು. ಹುಟ್ಟಿದ ದಿನಾಂಕ ಸಹಿತ ಮಾನ್ಯವಾದ ಫೋಟೋ ಐಡಿ ಹೊಂದಿರಬೇಕು. ಎಕಾನಮಿ ಕ್ಯಾಬಿನ್ ಬುಕಿಂಗ್ ವಿಭಾಗಕ್ಕೆ ಮೂಲ ಶುಲ್ಕದ ಶೇ.50 ರಷ್ಟು ಪಾವತಿಸಬೇಕಾಗುತ್ತದೆ. ಈ ಕೊಡುಗೆ ಭಾರತದ ಯಾವುದೇ ವಲಯಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ. ಟಿಕೆಟ್ ಮುದ್ರಣಗೊಂಡ ದಿನಾಂಕದಿಂದ ಆರಂಭಗೊಂಡಂತೆ ಒಂದು ವರ್ಷದವರೆಗೆ ಈ ಕೊಡುಗೆ ಅನ್ವಯವಾಗುತ್ತದೆ.
ಏರ್ ಇಂಡಿಯಾವು 60 ಸಾವಿರ ಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಹೀಗಾಗಿ ಸರ್ಕಾರ ಅದನ್ನು ಮಾರಾಟ ಮಾಡಲು ಬಯಸಿದೆ. ಇದಕ್ಕಾಗಿ ಬಿಡ್ಗಳನ್ನು ಕೋರಲಾಗಿದೆ. ಮುಂದಿನ ವರ್ಷ ಅದರ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ