Supreme court; ವಿಚಾರಣೆಗೆ ಮುನ್ನವೇ ವರದಿ ಪ್ರಕಟನೆಗೆ ತಡೆ ಬೇಡ: ಸುಪ್ರೀಂ
ಇಂಜಕ್ಷನ್ ಆರ್ಡರ್ನಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದ ಕೋರ್ಟ್
Team Udayavani, Mar 26, 2024, 11:50 PM IST
ಹೊಸದಿಲ್ಲಿ: ಅಸಾಮಾನ್ಯ ಸಂದರ್ಭಗಳನ್ನು ಹೊರತುಪಡಿಸಿ ನ್ಯಾಯಾಲಯಗಳು, ವಿಚಾರಣೆ ಪೂರ್ವವೇ ಸುದ್ದಿ, ವರದಿಗಳ ಪ್ರಕಟನೆಗೆ ತಡೆಯಾಜ್ಞೆ (ಇಂಜಕ್ಷನ್) ನೀಡಬಾರದು. ಹಾಗೊಂದು ವೇಳೆ ನೀಡಿದರೆ ಅದು ವರದಿಯ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಲ್ಲದೇ, ಸಾರ್ವಜನಿಕ ಮಾಹಿತಿ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜೀ ಎಂಟರ್ಪ್ರೈಸಸ್ ವಿರುದ್ಧ ಬ್ಲೂಮ್ಬರ್ಗ್ ಪ್ರಕಟಿಸಿದ ವರದಿಯನ್ನು ತೆಗೆದು ಹಾಕುವಂತೆ ಸೂಚಿಸಿದ್ದ ಕೆಳ ಹಂತದ ಕೋರ್ಟ್ ಆದೇಶವನ್ನು ದಿಲ್ಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನು ಬ್ಲೂಮ್ಬರ್ಗ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಸಿಜೆಐ ಡಿ.ವೈ.ಚಂದ್ರ ಚೂಡ್ ನೇತೃತ್ವದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ, ಮಾಧ್ಯಮಗಳಲ್ಲಿ ಪ್ರಕಟನೆಗೊಳಗಾಗುವ ವಿಷಯವು ದುರದ್ದೇಶ ಮತ್ತು ಸ್ಪಷ್ಟವಾಗಿ ತಪ್ಪು ಮಾಹಿತಿಯಿಂದ ಕೂಡಿದೆ ಎಂಬುದು ಸಾಬೀತಾಗದೇ ತಡೆಯಾಜ್ಞೆ ನೀಡುವುದು ಬೇಡ. ಎಲ್ಲರ ವಾದವನ್ನು ಆಲಿಸದೇ ತಡೆ ನೀಡಬಾರದು. ವಿಚಾರಣೆ ಪೂರ್ವವೇ ತಡೆ ನೀಡುವುದರಿಂದ ಸಾರ್ವಜನಿಕ ಚರ್ಚೆ ದಿಕ್ಕನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದೆ.
ಈ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯದ ಜಡ್ಜ್ ಮಾಡಿರುವ ತಪ್ಪನ್ನು ದಿಲ್ಲಿ ಹೈಕೋರ್ಟ್ನಲ್ಲಿ ಮುಂದುವರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ