ಸಂಶೋಧನೆ: ಭೂಮಿಯ ಒಳಪದರದ ತಿರುಗುವಿಕೆ ಬಂದ್…ಇದರಿಂದಾಗುವ ಪರಿಣಾಮವೇನು?

60-70 ವರ್ಷಗಳಿಗೊಮ್ಮೆ ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸುತ್ತದೆ

Team Udayavani, Jan 27, 2023, 12:55 PM IST

ಸಂಶೋಧನೆ: ಭೂಮಿಯ ಒಳಪದರದ ತಿರುಗುವಿಕೆ ಬಂದ್…ಇದರಿಂದಾಗುವ ಪರಿಣಾಮವೇನು?

ಭೂಮಿ ಮೇಲೆ ವಾಸಿಸುವ ಮನುಷ್ಯನಿಗೆ ಭೂಮಂಡಲದ ಒಳಗೆ ಏನು ನಡೆಯುತ್ತಿದೆ, ಬಾಹ್ಯಾಕಾಶದಲ್ಲಿ ಏನೇನು ನಡೆಯುತ್ತಿರುತ್ತದೆ ಎಂಬ ಬಗ್ಗೆ ಏನೂ ತಿಳಿಯುವುದಿಲ್ಲ. ಆದರೆ ಭೂಮಿಯ ಒಳಪದರವು ಇತರ ಗ್ರಹಗಳಿಗಿಂತ ಹೆಚ್ಚು ವೇಗವಾಗಿ ತಿರುಗುತ್ತದೆ ಎಂಬುದು ವಿಜ್ಞಾನಿಗಳ ನಂಬಿಕೆಯಾಗಿತ್ತು. ಏತನ್ಮಧ್ಯೆ ನೂತನ ಸಂಶೋಧನೆ ಪ್ರಕಾರ, 2009ರ ಹೊತ್ತಿಗೆ ಕಾಲ್ಪನಿಕ ವೈಜ್ಞಾನಿಕ ಸಿನಿಮಾದಂತೆ “ಭೂಮಿಯ ಒಳಪದರ” ನಿಧಾನವಾಗಿ ತಿರುಗುತ್ತಿದೆ” ಎಂದು ತಿಳಿಸಿದೆ!

ಇದನ್ನೂ ಓದಿ:ಲಂಚದಿಂದ ಪಕ್ಷ ಕಟ್ಟಿದ್ದಲ್ಲ: ಕಾಂಗ್ರೆಸ್‌ ನಾಯಕರಿಗೆ ಪ್ರಮೋದ್‌ ಮಧ್ವರಾಜ್ ತಿರಗೇಟು

ಭೂಕಂಪನ ದತ್ತಾಂಶಗಳ ಅಧ್ಯಯನದ ಪ್ರಕಾರ, ಭೂಮಿಯ ಒಳಪದರವು ಸರಾಸರಿ 60-70 ವರ್ಷಗಳಿಗೊಮ್ಮೆ ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸುತ್ತದೆ ಎಂಬುದು ತಿಳಿದು ಬಂದಿದೆ.

“ಈ ಬದಲಾವಣೆಯಿಂದ ಭೂಮಿಯ ಮೇಲೆ ವಾಸ ಮಾಡುವ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆ ಇನ್ನಷ್ಟೇ ಅಧ್ಯಯನದ ಮೂಲಕ ತಿಳಿದು ಬರಬೇಕಾಗಿದೆ” ಎಂದು ವರದಿ ತಿಳಿಸಿದೆ.

ಭೂಮಿಯ ಒಳಪದರ ತಿರುಗುವಿಕೆಯ ಈ ಮಾದರಿಯು ಭೂಮಿಯ ಸುತ್ತಲಿನ ಕಾಂತೀಯ ಕ್ಷೇತ್ರದಲ್ಲಿನ ವ್ಯತ್ಯಾಸಗಳು, ಜಾಗತಿಕ ಸರಾಸರಿಯ ಸಮುದ್ರ ಮಟ್ಟ, ಭೂ ಒಳಪದರದ ಕೆಲವು ಚಟುವಟಿಕೆ, ಜಾಗತಿಕ ತಾಪಮಾನ ಮತ್ತು ಇತರ ವಿದ್ಯಮಾನಗಳ ಕುರಿತ ಸಂಭಾವ್ಯ ವಿವರಣೆಯನ್ನು ಒದಗಿಸುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ.

ಬೀಜಿಂಗ್ ನ ಪೀಕಿಂಗ್ ಯೂನಿರ್ವಸಿಟಿಯ ಸಂಶೋಧಕರಾದ ಯಿ ಯಾಂಗ್ ಮತ್ತು ಕ್ಸಿಯಾಡಾಂಗ್ ಅವರು ನಡೆಸಿದ ಅಧ್ಯಯನ ವರದಿಯನ್ನು ನೇಚರ್ ಜಿಯೋಸೈನ್ಸ್ ಜರ್ನಲ್ ಪ್ರಕಟಿಸಿದೆ. 1996ರಲ್ಲಿ ಭೂಮಿಯ ಒಳಪದರ ತಿರುಗುತ್ತಿದೆ ಎಂದು ಮೊದಲ ಬಾರಿಗೆ ಪುರಾವೆ ಒದಗಿಸಿದ ಅಧ್ಯಯನ ತಂಡದಲ್ಲಿ ಕ್ಸಿಯಾಡಾಂಗ್ ಕೂಡಾ ಇದ್ದಿದ್ದರು ಎಂದು ವರದಿ ವಿವರಿಸಿದೆ.

“2009ರ ಹೊತ್ತಿಗೆ ಭೂಮಿ ಒಳಪದರದ ಸೂಪರ್ ರೋಟೇಶನ್(ತಿರುಗುವಿಕೆ) ನಿಂತು ಹೋಗಿರುವುದನ್ನು ಪತ್ತೆಹಚ್ಚಲಾಗಿತ್ತು. ಈ ಬದಲಾವಣೆಗಳನ್ನು ಭೂಮಿಯ ವಿವಿಧ ಭಾಗಗಳಲ್ಲಿ ಗಮನಿಸಿದ್ದು, ಈ ವಿದ್ಯಮಾನವನ್ನು ದೃಢಪಡಿಸಲಾಗಿತ್ತು. ಏತನ್ಮಧ್ಯೆ ಭೂಮಿಯ ಒಳಪದರ ಸಬ್ ರೋಟೇಶನ್ (ನಿಧಾನವಾಗಿ) ಪ್ರಾರಂಭಿಸಿತ್ತು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

elephant

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

Gurudev hoysala

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್‌ ಅಬ್ಬರ

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ!

donald-trump

ಟ್ರಂಪ್ ವಿರುದ್ಧ ಕ್ರಿಮಿನಲ್ ಅರೋಪ: ಏನಿದು ಟ್ರಂಪ್- ಪಾರ್ನ್ ಸ್ಟಾರ್ ಡೇನಿಯಲ್ಸ್ ಹಣದ ವಿಚಾರ?

poli

ಡೈಲಿ ಡೋಸ್‌: ಎತ್ತಿನ ಗಾಡಿ ಬದಲಾಗೋದಿಲ್ಲ – ಬರೋರು ಬದಲಾಗ್ತಾರೆ !

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ನಾಳೆಯಿಂದ ಬದಲಾವಣೆಯ ಪರ್ವ: ಏನೇನು ಬದಲಾವಣೆ? ಇಲ್ಲಿದೆ ವಿವರ

ನಾಳೆಯಿಂದ ಬದಲಾವಣೆಯ ಪರ್ವ: ಏನೇನು ಬದಲಾವಣೆ? ಇಲ್ಲಿದೆ ವಿವರ

ಔಷಧ ಕಸ್ಟಮ್ಸ್‌ ಸುಂಕ ವಿನಾಯಿತಿ: ಏಪ್ರಿಲ್ ೧ ರಿಂದ ಹೊಸ ನಿಯಮ

ಔಷಧ ಕಸ್ಟಮ್ಸ್‌ ಸುಂಕ ವಿನಾಯಿತಿ: ಏಪ್ರಿಲ್ 1 ರಿಂದ ಹೊಸ ನಿಯಮ

ಎನ್‌ಕೌಂಟರ್‌ ಕೇಸಲ್ಲಿ ಮೋದಿ ಹೆಸರು ಹೇಳಲು ಒತ್ತಡ ಹೇರಿದ್ದ ಸಿಬಿಐ! ಅಮಿತ್‌ ಶಾ ಆರೋಪ

ಎನ್‌ಕೌಂಟರ್‌ ಕೇಸಲ್ಲಿ ಮೋದಿ ಹೆಸರು ಹೇಳಲು ಒತ್ತಡ ಹೇರಿದ್ದ ಸಿಬಿಐ! ಅಮಿತ್‌ ಶಾ ಆರೋಪ

ಜರ್ಮನಿ ಹಸ್ತಕ್ಷೇಪ: ಬಿಜೆಪಿ-ಕಾಂಗ್ರೆಸ್‌ ವಾಕ್ಸಮರ

ಜರ್ಮನಿ ಹಸ್ತಕ್ಷೇಪ: ಬಿಜೆಪಿ-ಕಾಂಗ್ರೆಸ್‌ ವಾಕ್ಸಮರ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

3–hunsur

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

elephant

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

ಅಗ್ನಿ ಆಕಸ್ಮಿಕ: ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿ

ಅಗ್ನಿ ಆಕಸ್ಮಿಕ: ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿ

Gurudev hoysala

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್‌ ಅಬ್ಬರ