EC; ಕಿವುಡ, ಕುಂಟ, ಹುಚ್ಚ ಪದಗಳನ್ನು ಬಳಸುವಂತಿಲ್ಲ: ರಾಜಕಾರಣಿಗಳು, ಅಭ್ಯರ್ಥಿಗಳಿಗೆ ಸೂಚನೆ
ಅಂಗವಿಕಲರನ್ನು ಅವಮಾನಿಸುವ ಪದ ಬಳಸದಂತೆ ಚುನಾವಣ ಆಯೋಗ ಎಚ್ಚರಿಕೆ
Team Udayavani, Dec 22, 2023, 6:20 AM IST
ಹೊಸದಿಲ್ಲಿ: ರಾಜಕಾರಣಿಗಳು, ಅಭ್ಯರ್ಥಿಗಳು ಅಂಗವಿಕಲರಿಗೆ (ಶಾರೀರಿಕ ನ್ಯೂನತೆ ಉಳ್ಳವರು) ಅವಮಾನ ಉಂಟಾಗುವಂತಹ ಪದ/ವಾಕ್ಯಗಳನ್ನು ಸಾರ್ವಜನಿಕ ಭಾಷಣಗಳಲ್ಲಿ ಬಳಸಬಾರದು. ಹಾಗೊಂದು ವೇಳೆ ಬಳಸಿದರೆ ಅದನ್ನು ಅಂಗವಿಕಲರಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುವುದು ಎಂದು ಚುನಾವಣ ಆಯೋಗ ಎಚ್ಚರಿಕೆ ನೀಡಿದೆ.
ದೇಶದ ಎಲ್ಲ ರಾಜಕೀಯ ಪಕ್ಷಗಳು, ರಾಜಕಾರಣಿಗಳಿಗೆ ಈ ಮೂಲಕ ಸಭ್ಯ ಭಾಷೆಯನ್ನು ಬಳಸಬೇಕೆಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ಬಳಸಿದರೆ “ಅಂಗವೈಕಲ್ಯಗಳನ್ನುಳ್ಳ ವ್ಯಕ್ತಿಗಳ ಹಕ್ಕು ಕಾಯ್ದೆಯ 92ರ ವಿಧಿಯನ್ವಯ’ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದೆ.
ರಾಜಕೀಯ ಪಕ್ಷಗಳು ಅಂಗವಿಕಲರನ್ನು ಪಕ್ಷದ ಸದಸ್ಯರು, ಕಾರ್ಯಕರ್ತರನ್ನಾಗಿ ತೆಗೆದುಕೊಳ್ಳಬೇಕು. ಆ ಮೂಲಕ ಅವರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೆಗೆದು ಹಾಕಬೇಕು, ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಎಲ್ಲ ಪ್ರಚಾರ ಸಾಮಗ್ರಿಗಳನ್ನು (ಭಾಷ ಣಗಳು, ಸಾಮಾಜಿಕ ತಾಣಗಳಲ್ಲಿನ ಪೋಸ್ಟ್ ಗಳು, ಜಾಹೀರಾತು, ಮಾಧ್ಯಮ ಪ್ರಕಟನೆ ಗಳು) ಮೊದಲು ಆಂತರಿಕ ಪರಿಶೀಲನೆಗೊಳಪಡಿಸಬೇಕು ಎಂದು ಆಯೋಗ ಹೇಳಿದೆ.
ಯಾವ್ಯಾವ ಪದಗಳಿಗೆ ನಿರ್ಬಂಧ?: ಎಲ್ಲ ಕಡೆ ಸಾಮಾನ್ಯವಾಗಿ ಬಳಸುವಂತಹ ಮೂಗ, ಹುಚ್ಚ, ಕುರುಡ, ಕಿವುಡ, ಕುಂಟ… ಈ ರೀತಿಯ ಪದಗಳನ್ನು ಬಳಸ ಬಾರದೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ