ಏಕತೆ ಒಡೆಯುವ ಪ್ರಯತ್ನದ ವಿರುದ್ಧ ದೇಶ ದೃಢವಾಗಿ ನಿಲ್ಲಬೇಕು: ಪ್ರಧಾನಿ ಮೋದಿ
ಏಕತಾ ಪ್ರತಿಮೆಯ ಬಳಿಯ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ರದ್ದು
Team Udayavani, Oct 31, 2022, 2:01 PM IST
ಕೆವಾಡಿಯಾ: ”ಶತ್ರುಗಳು ಭಾರತದ ಏಕತೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಂತಹ ಪ್ರಯತ್ನಗಳ ವಿರುದ್ಧ ದೇಶವು ದೃಢವಾಗಿ ನಿಲ್ಲಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮೋದಿ ಅವರು ಭಾನುವಾರದ ಮೋರ್ಬಿ ಸೇತುವೆ ಕುಸಿತದ ಘಟನೆಯಲ್ಲಿ ಮಡಿದವರನ್ನು ನೆನಪಿಸಿಕೊಂಡರು.”ನಾನು ಕೆವಾಡಿಯಾದಲ್ಲಿದ್ದೇನೆ, ಆದರೆ ಮೋರ್ಬಿ ಸೇತುವೆ ಕುಸಿತದ ದುರಂತದಲ್ಲಿ ಸಾವನ್ನಪ್ಪಿದವರಿಗೆ ನನ್ನ ಹೃದಯ ಮಿಡಿಯುತ್ತಿದೆ” ಎಂದು ಪ್ರಧಾನಿ ಅವರು ಭಾವುಕರಾದರು.
ಇದನ್ನೂ ಓದಿ : ಸೇತುವೆ ದುರಂತ ನಡೆದ ಮೊರ್ಬಿಗೆ ನಾಳೆ ಪ್ರಧಾನಿ ಮೋದಿ ಭೇಟಿ
ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲು ದೇಶಾದೆಲ್ಲೆಡೆಯ ತಂಡಗಳು ಕೆವಾಡಿಯಾಕ್ಕೆ ಬಂದಿದ್ದವು, ಆದರೆ ಪ್ರಸ್ತುತ ಸನ್ನಿವೇಶದಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.
“ನಮ್ಮ ದೇಶದ ಈ ಐಕ್ಯತೆಯು ನಮ್ಮ ಶತ್ರುಗಳ ಕಣ್ಣಿಗೆ ಬಿತ್ತು. ಇಂದು ಮಾತ್ರವಲ್ಲ, ಸಾವಿರಾರು ವರ್ಷಗಳಿಂದ ಮತ್ತು ನಮ್ಮ ಗುಲಾಮಗಿರಿಯ ಅವಧಿಯಲ್ಲಿಯೂ ಸಹ, ಎಲ್ಲಾ ವಿದೇಶಿ ದಾಳಿಕೋರರು ಈ ಏಕತೆಯನ್ನು ಮುರಿಯಲು ಏನು ಬೇಕಾದರೂ ಮಾಡಿದರು. ಸುಧೀರ್ಘ ಅವಧಿಯಲ್ಲಿ ಹರಡಿದ ವಿಷ, ಇಂದು ದೇಶವು ಸಮಸ್ಯೆ ಎದುರಿಸುತ್ತಿದೆ. ದೇಶದ ವಿಭಜನೆ ಮತ್ತು ಶತ್ರುಗಳು ಅದರ ಲಾಭ ಪಡೆಯುವುದನ್ನು ನಾವು ನೋಡಿದ್ದೇವೆ” ಎಂದರು.
”ದುಷ್ಟ ಶಕ್ತಿಗಳು ಇನ್ನೂ ಚಾಲ್ತಿಯಲ್ಲಿವೆ, ಅವರು ಜಾತಿ, ಪ್ರದೇಶ ಮತ್ತು ಭಾಷೆಯ ಹೆಸರಿನಲ್ಲಿ ದೇಶದ ಜನರನ್ನು ಹೋರಾಡುವಂತೆ ಮಾಡಲು ಬಯಸುತ್ತಾರೆ, ಜನರು ಪರಸ್ಪರ ನಿಲ್ಲಲು ಸಾಧ್ಯವಾಗದ ರೀತಿಯಲ್ಲಿ ಇತಿಹಾಸವನ್ನು ಸಹ ಪ್ರಸ್ತುತಪಡಿಸಲಾಗಿದೆ. ಈ ಶಕ್ತಿಗಳು ಹೊರಗಿನಿಂದ ನಮಗೆ ತಿಳಿದಿರುವ ಶತ್ರುಗಳಲ್ಲ, ಆದರೆ ಅನೇಕ ಬಾರಿ ಆ ಶಕ್ತಿಗಳು ಗುಲಾಮ ಮನಸ್ಥಿತಿಯ ರೂಪದಲ್ಲಿ ನಮ್ಮ ವ್ಯವಸ್ಥೆಯನ್ನು ಪ್ರವೇಶಿಸುತ್ತವೆ. ನಾವು ಅವರಿಗೆ ಈ ದೇಶದ ಮಗನಾಗಿ ಉತ್ತರಿಸಬೇಕು, ನಾವು ಒಂದಾಗಿ ಉಳಿಯಬೇಕು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ