ಅಧಿಕಾರಿ ಅಮಾನತಿಗೆ ವ್ಯಾಪಕ ಖಂಡನೆ
Team Udayavani, Apr 19, 2019, 6:47 AM IST
ಇತ್ತೀಚೆಗೆ ಒಡಿಶಾದ ಸಂಭಲ್ಪುರದ ರ್ಯಾಲಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರನ್ನು ತಪಾಸಣೆ ಮಾಡಿದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೌಸಿನ್ ಅವರನ್ನು ಅಮಾನತುಗೊಳಿಸಿರುವ ಚುನಾವಣಾ ಆಯೋಗದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ನೀತಿ ಸಂಹಿತೆಯು, ಜನಪ್ರತಿನಿಧಿಗಳು ಸರ್ಕಾರಿ ವಾಹನಗಳ ಉಪಯೋಗಿಸುವುದನ್ನು ನಿರ್ಬಂಧಿಸುತ್ತದೆ. ಅಂಥ ಸಂದರ್ಭದಲ್ಲಿ, ಪ್ರಧಾನಿಯಾದರೂ ಸರಿ, ಅವರ ವಾಹನವನ್ನು ತಪಾಸಣೆಗೊಳಿಸಲು ಅವಕಾಶವಿದೆ. ತಮ್ಮ ವಿಮಾನದಲ್ಲಿ ದೇಶಕ್ಕೆ ಕಾಣಬಾರದು ಎನ್ನುವಂಥ ಅದ್ಯಾವ ಸಾಮಗ್ರಿಯನ್ನು ಮೋದಿ ಕೊಂಡೊಯ್ದಿದ್ದರು’ ಎಂದು ಪ್ರಶ್ನಿಸಿದೆ.
ಇನ್ನು, ಆಮ್ ಆದ್ಮಿ ಪಾರ್ಟಿ (ಆಪ್) ಕೂಡ ಟ್ವಿಟರ್ ಮೂಲಕ ದಾಳಿ ಮಾಡಿದ್ದು, “ತಪಾಸಣೆ ನಡೆಸಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದರೆ, ದೇಶವನ್ನು ಕಾಯಬೇಕಾದ ಚೌಕಿದಾರ ಸ್ವತಃ ತಾನೇ ಪ್ರತ್ಯೇಕ ರಕ್ಷಣೆಯಲ್ಲಿದ್ದಾನೆ ಎಂದರ್ಥ’ ಎಂದು ಕುಟುಕಿದೆ.
ಅತ್ತ, “ಈ ಬೆಳವಣಿಗೆ ಬಗ್ಗೆ ಭುವನೇಶ್ವರದಲ್ಲಿ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಪ್ರಧಾನಿ ಹೆಲಿಕಾಪ್ಟರ್ ತಪಾಸಣೆಯು ಚುನಾವಣಾ ಆಯೋಗದ ನಿಯಮಗಳ ವ್ಯಾಪ್ತಿಗೊಳಪಡು ವುದಿಲ್ಲ. ಇತ್ತೀಚೆಗೆ, ಒಡಿಶಾದಲ್ಲಿ ಸಿಎಂ ನವೀನ್ ಪಟ್ನಾಯಕ್ ಹೆಲಿಕಾಪ್ಟರ್, ಸಂಭಲ್ಪುರದಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಲಿಕಾಪ್ಟರ್ಗಳನ್ನೂ ತಪಾಸಣೆಗೊಳಪಡಿಸ ಲಾಗಿತ್ತು’ ಎಂದಿದ್ದಾರೆ.
ಧರ್ಮೇಂದ್ರ ರಗಳೆ
ಇತ್ತೀಚೆಗೆ ಸಂಬಲ್ಪುರದಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ರವರ ಹೆಲಿಕಾಪ್ಟರ್ ತಪಾಸಣೆಗೊಳಪಡಿಸುವಾಗ ಸೀಲ್ ಮಾಡಿದ ಸೂಟ್ಕೇಸ್ ಪತ್ತೆಯಾಗಿ ರುವುದು ಹಾಗೂ ತಪಾಸಣೆ ವೇಳೆ ಭದ್ರತಾ ಪಡೆಗಳೊಂದಿಗೆ ಸಚಿವ ಪ್ರಧಾನ್ ಅನುಚಿತವಾಗಿ ವರ್ತಿಸಿದ್ದರ ವಿರುದ್ಧ ಬಿಜು ಜನತಾದಳ (ಜಿಜೆಡಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ