ನಿಖರ ಮುನ್ಸೂಚನೆಗೆ ಡೋಪ್ಲರ್ ರಾಡಾರ್
Team Udayavani, May 14, 2018, 8:30 AM IST
ಕಳೆದೊಂದು ತಿಂಗಳಿಂದ ದೇಶದ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆ, ಧೂಳು ಬಿರುಗಾಳಿಯು ಜನಜೀವನ ಅಸ್ತವ್ಯಸ್ತಗೊಳಿಸಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನದ ನಿಖರ ಮುನ್ಸೂಚನೆ ನೀಡುವಂಥ 30 ಡೋಪ್ಲರ್ ರಾಡಾರ್ಗಳನ್ನು ಮುಂದಿನ 2-3 ವರ್ಷಗಳಲ್ಲೇ ದೇಶಾದ್ಯಂತ ಅಳವಡಿಸಲು ಹವಾಮಾನ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಏನಿದು ಡೋಪ್ಲರ್ ರಾಡಾರ್?
ಸಾಮಾನ್ಯ ಮಳೆ, ಗುಡುಗಿನಿಂದ ಕೂಡಿದ ಮಳೆ, ಧೂಳು ಬಿರುಗಾಳಿ, ಆಲಿಕಲ್ಲುಮಳೆ ಹಾಗೂ ಗಾಳಿಯ ಕುರಿತು ನಿಖರ ಮುನ್ಸೂಚನೆಯನ್ನು ನೀಡುವಂಥ ವ್ಯವಸ್ಥೆಯಿದು.
ಯಾವ ರಾಜ್ಯಗಳಲ್ಲಿ ಹೆಚ್ಚು?
ಉತ್ತರಾಖಂಡ, ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ, ಮಳೆ, ಹಿಮ ವರ್ಷದ ಪ್ರಮಾಣ ಹೆಚ್ಚಿರುವ ಕಾರಣ ಈ ರಾಜ್ಯಗಳತ್ತ ಹೆಚ್ಚು ಗಮನಹರಿಸಲಾಗಿದೆ. ಇಲ್ಲಿ ಅಧಿಕ ಪ್ರಮಾಣದಲ್ಲಿ ರಾಡಾರ್ ಅಳವಡಿಸಲಾಗುತ್ತದೆ. 2013ರಲ್ಲಿ ಉತ್ತರಾಖಂಡದಲ್ಲಿ ನಡೆದ ಮೇಘಸ್ಫೋಟಕ್ಕೆ ಸಾವಿರಾರು ಮಂದಿ ಬಲಿಯಾಗಿದ್ದರು. ಜತೆಗೆ, ಇತ್ತೀಚೆಗೆ ಉತ್ತರಪ್ರದೇಶ, ರಾಜಸ್ಥಾನದಲ್ಲಿ 120 ಮಂದಿಯನ್ನು ಧೂಳು ಬಿರುಗಾಳಿ ಬಲಿತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಜೈಪುರದಲ್ಲಿದ್ದ ರಾಡಾರ್ ದುರಸ್ತಿಗೀಡಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
– ಡೋಪ್ಲರ್ ರಾಡಾರ್ ನ ರೇಡಿಯಸ್ : 250 ಕಿ.ಮೀ.
– 2 – 3 ಗಂಟೆಗಳ ಮುಂಚೆಯೇ ಹವಾಮಾನ ಕುರಿತ ನಿಖರ ಮಾಹಿತಿ ನೀಡುತ್ತದೆ
– 14 ಈಶಾನ್ಯ ರಾಜ್ಯಗಳಲ್ಲಿ ಅಳವಡಿಸಲಾಗುವ ರಾಡಾರ್ಗಳು
-2002ರಲ್ಲಿ ಮೊದಲ ಡೋಪ್ಲರ್ ರಾಡಾರ್ ಅಳವಡಿಸಿದ್ದು ಚೆನ್ನೈಯಲ್ಲಿ
– 30 ಮುಂದಿನ 2ರಿಂದ 3 ವರ್ಷಗಳಲ್ಲಿ ಅಳವಡಿಸಲಾಗುವ ರಾಡಾರ್ಗಳ ಸಂಖ್ಯೆ
– 27 ಸದ್ಯ ದೇಶಾದ್ಯಂತ ಇರುವ ರಾಡಾರ್ಗಳ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ