ಕೊನೆಗೂ ತೆಂಗಿನ ಮರದಿಂದ ಇಳಿಯುವಲ್ಲಿ ಯಶಸ್ವಿಯಾದ ಚಿರತೆ!
ಅರಣ್ಯ ಇಲಾಖೆ ಸಿಬಂದಿಗಳು ವಿಫಲವಾಗಿದ್ದರು...
Team Udayavani, May 15, 2023, 3:14 PM IST
ಪಣಜಿ: ಕುಯ್ನಾನ್ ಸಾವಯಿ ವೇರೆಮ್ನಲ್ಲಿ ಎತ್ತರದ ತೆಂಗಿನ ಮರದಲ್ಲಿ ಸಿಲುಕಿಬಿದ್ದಿದ್ದ ಚಿರತೆಯನ್ನು ದಿನವಿಡೀ ಕಾರ್ಯಾಚರಣೆ ನಡೆಸಿ ಕೊನೆಗೂ ಮರದಿಂದ ಕೆಳಗಿಳಿಸುವಲ್ಲಿ ಅರಣ್ಯ ಇಲಾಖೆ ಸಿಬಂದಿಗಳು ವಿಫಲವಾಗಿದ್ದರು. ಆದರೆ ಮಧ್ಯರಾತ್ರಿಯ ವೇಳೆಗೆ ಚಿರತೆ ತಾನಾಗಿಯೇ ತೆಂಗಿನ ಮರದಿಂದ ಕೆಳಗಿಳಿದು ಅರಣ್ಯಕ್ಕೆ ಸೇರಿಕೊಂಡಿದೆ.
ಭಾನುವಾರ ದಿನವಿಡೀ ಚಿರತೆಯನ್ನು ಕೆಳಗಿಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿಗಳು ಹರಸಾಹಸಪಟ್ಟಿದ್ದರು. ಆದರೆ, ಚಿರತೆ ಕೆಳಗಿಳಿಯಲಿಲ್ಲ. ಕೊನೆಗೆ ಭಾನುವಾರ ಮಧ್ಯರಾತ್ರಿ ಚಿರತೆ ಮರದಿಂದ ಕೆಳಗಿಳಿದು ಕಾಡಿಗೆ ಸೇರಿದೆ.
ಸಾವಯಿ ವೇರೆಮ್ನಲ್ಲಿ ಚಿರತೆ ತಾನಾಗಿಯೇ ಮರದಿಂದ ಕೆಳಕ್ಕಿಳಿದು ಪರಾರಿಯಾಗಿದೆ ಎಂದು ಅರಣ್ಯಾಧಿಕಾರಿ ದೀಪಕ್ ತಾಂಡೇಲ್ ತಿಳಿಸಿದ್ದಾರೆ. ಹೀಗಾಗಿ ನಾಡಿಗೆ ಬಂದು ತೆಂಗಿನ ಮರದ ಮೇಲೆ ಚಿರತೆ ಕುಳಿತಿದ್ದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್