ಆಂಧ್ರಪ್ರದೇಶ ರಸ್ತೆ ಅಪಘಾತ ಕಾಸರಗೋಡು ಮೂಲದ ನಾಲ್ವರ ದುರ್ಮರಣ
Team Udayavani, Mar 11, 2018, 8:11 AM IST
ಆಂಧ್ರಪ್ರದೇಶ: ಕಾರಿಗೆ ಬಸ್ಸೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಸರಗೋಡು ಮೂಲದ ಓರ್ವ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿ 5 ಮಂದಿ ಗಂಭೀರ ಗಾಯಗೊಂಡ ಘಟನೆ ಆಂದ್ರಪ್ರದೇಶದ ಚಿತ್ತೂರಿನಲ್ಲಿ ರವಿವಾರ ಮುಂಜಾನೆ 3.30ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಕಾಸರಗೋಡು ಮೂಲದ ಕುಂಬಳೆಯ ನಾಯ್ಕಪಿನವರಾದ ಪಕೀರ ಗಟ್ಟಿ, ಸಹೋದರ ಮಂಜಪ್ಪ ಗಟ್ಟಿ, ಮಂಜಪ್ಪ ಗಟ್ಟಿ ಪತ್ನಿ ಸುಂದರಿ ಸೇರಿ ನಾಲ್ವರು ಮೃತಪಟ್ಟ ಮಾಹಿತಿ ತಿಳಿದುಬಂದಿದೆ.
ಕಾರಿನಲ್ಲಿ 9 ಮಂದಿ ಸಂಚರಿಸುತ್ತಿದ್ದು ಕಾರಿಗೆ ಬಸ್ಸು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕುಟುಂಬ ಸದಸ್ಯರು ಮಧೂರು ಪಲ್ಲಕೋಡು ತರವಾಡು ಮನೆಯಲ್ಲಿ ಮುಡಿಪು(ಹರಕೆಯ ಹುಂಡಿ)ಯನ್ನು ನೆರವೇರಿಸಿ ತಿರುಪತಿಗೆ ಹೊರಟಿದ್ದರು ಎಂದು ಮೂಲಗಳಿಂದ ತಿಳಿದುಬಂದಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಬಂಗಾರುಪಾಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.