ವಾಹನಕ್ಕೆ ಟ್ರಕ್ ಢಿಕ್ಕಿ : ಒಂದೇ ಕುಟುಂಬದ ನಾಲ್ವರ ದಾರುಣ ಸಾವು
Team Udayavani, Apr 29, 2017, 4:18 PM IST
ಬರ್ದ್ವಾನ್ (ಪಶ್ಚಿಮ ಬಂಗಾಲ): ಅಂದಾಲ್ ಸಮೀಪ ಕಜೋರಾ ರಸ್ತೆಯಲ್ಲಿ ಟ್ರಕ್ ಒಂದು ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಬಂಕುರಾ ಜಿಲ್ಲೆಯ ಘಂತಿಪಹಾಡ್ ಎಂಬಲ್ಲಿ ಮದುವೆ ಸಮಾರಂಭ ಮುಗಿಸಿ ದುರ್ಗಾಪುರದ ರಾಣಾ ಪ್ರತಾಪ್ ಪ್ರದೇಶಕ್ಕೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತು.
ಭಾರೀ ಸರಕು ತುಂಬಿದ ಟ್ರಕ್ ಒಂದು ತನ್ನ ಎದುರಲ್ಲಿ ಸಾಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ಆಗ ವಾಹನವು ತನ್ನ ಎದುರಿಗೆ ಸಾಗುತ್ತಿದ್ದ ಟ್ರೇಲರ್ಗೆ ಢಿಕ್ಕಿ ಹೊಡೆಯಿತು. ಇದರಿಂದಾಗಿ ವಾಹನವು ಸಂಪೂರ್ಣ ಅಪ್ಪಚ್ಚಿಯಾಯಿತು. ವಾಹನದೊಳಗೆ ಒಂದೇ ಕುಟುಂಬದ ಐವರು ಇದ್ದು ಅವರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು.
ಮೃತರನ್ನು ಮಿಲಾನ್ ಮುಖಜಿ, ಭಕ್ತಿ ಮುಖರ್ಜಿ, ಕೋನಿಕಾ ಮುಖರ್ಜಿ ಮತ್ತು ಸೌಮೇನ್ ಮುಖರ್ಜಿ (8ನೇ ತರಗತಿ ವಿದ್ಯಾರ್ಥಿನಿ) ಎಂದು ಗುರುತಿಸಲಾಗಿದೆ. ಗಾಯಾಳು ಜಿಬಾನ್ ಮುಖರ್ಜಿ ಅವರನ್ನು ಡಿಎಸ್ಪಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sadhguru; ಕಾವೇರಿ ಕಾಲಿಂಗ್ ಮೂಲಕ 10.9 ಕೋಟಿ ಸಸಿಗಳ ನಾಟಿ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು