ದೇಗುಲ ಪ್ರವೇಶಿಸಿದಾಕೆಗೆ ಮನೆಯಿಂದ ಗೇಟ್ಪಾಸ್!
Team Udayavani, Jan 23, 2019, 12:30 AM IST
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಿ ಸುದ್ದಿಯಾಗಿದ್ದ ಇಬ್ಬರು ಮಹಿಳೆಯರ ಪೈಕಿ 39 ವರ್ಷದ ಕನಕದುರ್ಗಾ ಅವರಿಗೆ ಈಗ ನೆಲೆಯಿಲ್ಲದಂತಾಗಿದೆ. ದೇಗುಲ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿ ರುವ ಅತ್ತೆ ಮನೆಯವರು ಕನಕದುರ್ಗಾರನ್ನು ಮನೆ ಯೊಳಗೆ ಬರದಂತೆ ಸೂಚಿಸಿದ್ದಾರೆ. ಹೀಗಾಗಿ, ಅವರು ಸದ್ಯಕ್ಕೆ ಸರ್ಕಾರಿ ಸಂಸ್ಥೆಯೊಂದರ ಆಶ್ರಯ ಪಡೆದಿದ್ದಾರೆ. ಕನಕದುರ್ಗಾ ಅವರು ಅತ್ತೆಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಬೆನ್ನಲ್ಲೇ ಈ ಬೆಳವಣಿಗೆಯೂ ನಡೆದಿದೆ.
ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳು ಕನಕದುರ್ಗಾ ಅವರ ಕುಟುಂಬದ ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ. ನಾಯರ್ ಕುಟುಂಬಕ್ಕೆ ಸೇರಿರುವ ಕನಕದುರ್ಗಾ ಅವರು ಲಕ್ಷಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಅವರು ತಮ್ಮ ಪಾಪ ತೊಳೆದುಕೊಳ್ಳುವವರೆಗೂ ಯಾರೂ ಅವರನ್ನು ಸ್ವೀಕರಿಸುವುದಿಲ್ಲ. ಕನಕದುರ್ಗಾ ಸಾರ್ವಜನಿಕವಾಗಿ ಕ್ಷಮೆ ಕೇಳಿಕೊಂಡರೆ ಮಾತ್ರವೇ ಅವರನ್ನು ಮನೆಯೊಳಗೆ ಸೇರಿಸುವುದಾಗಿ ಕುಟುಂಬ ಸದಸ್ಯರು ಪಟ್ಟು ಹಿಡಿದಿದ್ದಾರೆ.