ಗೋರಖ್ಪುರ ಮಕ್ಕಳ ಸಾವು; ಡಾ.ಕಾಫಿಲ್ ಖಾನ್ ಬಂಧನ
Team Udayavani, Sep 2, 2017, 10:04 AM IST
ಗೋರಖ್ಪುರ: ಇಲ್ಲಿನ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶಿಶುಗಳ ನಿರಂತರ ಸಾವಿಗೆ ಸಂಬಂಧಿಸಿ ಆಸ್ಪತ್ರೆಯ ವೈದ್ಯ ಡಾ. ಕಾಫಿಲ್ ಖಾನ್ ಅವರನ್ನು ಶನಿವಾರ ಉತ್ತರಪ್ರದೇಶದ ಎಸ್ಟಿಎಫ್ ಬಂಧಿಸಿದೆ. ನೋಡಲ್ ಅಧಿಕಾರಿಯಾಗಿದ್ದ ಖಾನ್ ಅವರನ್ನು ಈಗಾಗಲೇ ಹುದ್ದೆಯಿಂದ ವಜಾ ಮಾಡಲಾಗಿತ್ತು.
ಶುಕ್ರವಾರ ಶಿಶುಗಳ ಸಾವಿಗೆ ಸಂಬಂಧಿಸಿ ಗೋರ್ಖ್ಪುರ ಹೈಕೋರ್ಟ್ ಕಾಫಿಲ್ ಖಾನ್ ಸೇರಿದಂತೆ 7 ಮಂದಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ವೈದ್ಯರಾದ ಡಾ.ಸತೀಶ್, ಡಾ.ಗಜಾನನ್ ಜೈಸ್ವಾಲ್, ಲೆಕ್ಕಾಧಿಕಾರಿ ಸುಧೀರ್ ಪಾಂಡೆ , ಸಹಾಯಕ ಗುಮಾಸ್ತ ಸಂಜಯ್ ಕುಮಾರ್ ತ್ರಿಪಾಠಿ ,ಆಕ್ಸಿಜನ್ ಸರಬರಾಜು ಮಾಡುತ್ತಿದ್ದ ಉದಯ್ ಪ್ರತಾಪ್ ಸಿಂಗ್ ಮತ್ತು ಮನೀಷ್ ಭಂಡಾರಿ ಅವರ ವಿರುದ್ದ ವಾರಂಟ್ ಹೊರಡಿಸಲಾಗಿತ್ತು.
ವಾರದ ಒಳಗೆ 70 ಮಕ್ಕಳ ಸಾವಿನಿಂದ ಆಸ್ಪತ್ರೆ ಭಾರೀ ಸುದ್ದಿಯಾಗಿದ್ದು, ಆ ಬಳಿಕ ಪ್ರಸಕ್ತ ವರ್ಷವೊಂದರಲ್ಲೇ ಸಾವಿರಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು ಎನ್ನುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ