ಜಾರಿಗೂ ಮುನ್ನ ಜಿಎಸ್ ಟಿ ಮಂಡಳಿ ಸಭೆಯಿಂದ ರೈತರಿಗೆ ಬಿಗ್ ಗಿಫ್ಟ್
Team Udayavani, Jun 30, 2017, 8:59 PM IST
ನವದೆಹಲಿ: ಇಡೀ ದೇಶವೆ ಕಾತರಿಂದ ಕಾಯುತ್ತಿರುವ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ ಟಿ) ಜಾರಿಗೆ ಇನ್ನು ಕೆಲವೇ ಗಂಟೆಗಳ ಬಾಕಿ ಉಳಿದಿರುವ ನಡುವೆಯೇ ಶುಕ್ರವಾರ ಜಿಎಸ್ ಟಿ ಕೌನ್ಸಿಲ್ ರೈತರಿಗೆ ಖುಷಿ ಸುದ್ದಿಯನ್ನು ನೀಡಿದೆ.
ಜಿಎಸ್ ಟಿ ಕೌನ್ಸಿಲ್, ರಸಗೊಬ್ಬರಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಿದೆ. ಶೇ.12ರಷ್ಟು ಜಿಎಸ್ ಟಿ ಜಾರಿಯಿಂದ ರೈತರಿಗೆ ಹೊರಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಜಿಎಸ್ ಟಿ ಜಾರಿಗೂ ಮುನ್ನ ಜಿಎಸ್ ಟಿ ಕೌನ್ಸಿಲ್ ರೈತರಿಗೆ ಬಿಗ್ ಗಿಫ್ಟ್ ಅನ್ನು ನೀಡಿದೆ.
ಒಮ್ಮತಾಭಿಪ್ರಾಯದಿಂದ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲು ಜಿಎಸ್ ಟಿ ಕೌನ್ಸಿಲ್ ನಿರ್ಧರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯಿತು.ಟ್ರ್ಯಾಕ್ಟರ್ ಗಳ ಬಿಡಿಭಾಗಗಳ ಮೇಲಿನ ತೆರಿಗೆ ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ.